ADVERTISEMENT

ಹಸಿವಿನಿಂದ ಕಾರ್ಮಿಕ ಸಾವು

ಪಿಟಿಐ
Published 20 ಮೇ 2020, 21:56 IST
Last Updated 20 ಮೇ 2020, 21:56 IST

ಔರಂಗಾಬಾದ್‌: ಪುಣೆ ಯಿಂದ ಪರ್ಭಣಿ ಜಿಲ್ಲೆಯಲ್ಲಿರುವ ತನ್ನೂರಿಗೆ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರೊಬ್ಬರು ಹಸಿವು ಹಾಗೂ ನಿರ್ಜಲೀಕರಣದಿಂದ ಮೃತಪಟ್ಟಿದ್ದಾರೆ.

ಪಿಂಟು ಪವಾರ್‌ (40) ಮೃತ ಕಾರ್ಮಿಕ. ಬೀಡ್‌ ಜಿಲ್ಲೆಯ ಧನೋರಾ ಗ್ರಾಮದ ಬಳಿ ಪವಾರ್‌ ಮೃತ ದೇಹ ಪತ್ತೆಯಾಗಿದೆ. ಮೇ 15ರಂದು ಪಿಂಟು ಮೃತಪಟ್ಟಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ’ ಎಂದು ಅಂಬೋರಾ ಠಾಣೆ ಎಸ್‌ಐ ಜ್ಞಾನೇಶ್ವರ ಕುಕ್ಲಾರೆ ಬುಧವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT