ನವದೆಹಲಿ: ‘ಉತ್ತರಪ್ರದೇಶದ ಕಾನೂನು ಸುವ್ಯವಸ್ಥೆಯು ಗೂಂಡಾಗಳ ಮುಂದೆ ಶರಣಾಗಿದೆ, ರಾಜ್ಯದಲ್ಲಿ ಜನರು ಅಸುರಕ್ಷತೆಯ ಭಾವನೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಹಣ ಸುಲಿಗೆಗಾಗಿ ಕಾನ್ಪುರದ ಸಂಜೀತ್ ಯಾದವ್ ಎಂಬುವರನ್ನು ಅಪಕರಿಸಿದ್ದ ಗೂಂಡಾಗಳು, ಹಣ ಪಡೆದ ನಂತರವೂ ಅವರ ಹತ್ಯೆ ಮಾಡಿದ್ದರು. ಈ ಘಟನೆಯನ್ನು ಉಲ್ಲೇಖಿಸಿದ ಪ್ರಿಯಾಂಕಾ, ‘ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ರಸ್ತೆಯಲ್ಲಿರಲಿ, ಕಚೇರಿಯಲ್ಲಿರಲಿ ಅಥವಾ ಮನೆಯಲ್ಲೇ ಇರಲಿ, ಯಾರೊಬ್ಬರಲ್ಲೂ ಸುರಕ್ಷತೆಯ ಭಾವ ಇಲ್ಲದಾಗಿದೆ’ ಎಂದು ಕಿಡಿಕಾರಿದ್ದಾರೆ.
‘ಸಂಜೀತ್ ಯಾದವ್ ಅವರಿಂದ ಹಣವನ್ನು ಪಡೆದ ಪೊಲೀಸರು ಅದನ್ನು ಅಪಹರಣಕಾರರಿಗೆ ಒಪ್ಪಿಸಿದ್ದರು. ಅದಾದ ನಂತರವೂ ಸಂಜೀತ್ ಅವರ ಹತ್ಯೆಯಾಗಿದೆ. ರಾಜ್ಯದಲ್ಲಿ ಹೊಸ ಮಾದರಿಯ ‘ಗೂಂಡಾರಾಜ್’ ನಿರ್ಮಾಣವಾಗಿದೆ’ ಎಂದು ಪ್ರಿಯಾಂಕಾ ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.