ADVERTISEMENT

ಪ್ರಿಯಾಂಕಾ ಬಂದರು ಪುಳಕ ತಂದರು!

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 19:17 IST
Last Updated 20 ಏಪ್ರಿಲ್ 2019, 19:17 IST
   

ತಿರುವನಂತಪುರ: ಕೇರಳಕ್ಕೆ ಬಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಬೇಕು ಎಂದು ಬಯಸಿದ್ದ ಆ ಪೋರನ ಆಸೆ ಕೈಗೂಡಿರಲಿಲ್ಲ. ಆದರೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಶನಿವಾರ ಭೇಟಿಯಾದಾಗ ಅವನ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಅವನು ಕಣ್ಣೂರಿನ ಏಳು ವರ್ಷದ ಬಾಲಕ ನಂದನ್. ರಾಹುಲ್ ಭೇಟಿ ಸಾಧ್ಯವಾಗದಿದ್ದಾಗ ಕಣ್ಣೀರು ಹಾಕಿದ್ದ. ತಂದೆಗೂ ಮಗನ ಸ್ಥಿತಿ ನೋಡಲಾಗಲಿಲ್ಲ. ಅವನು ಅಳುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡರು. ಇದು ವೈರಲ್ ಆಗಿದ್ದಷ್ಟೇ ಅಲ್ಲ, ರಾಹುಲ್ ಗಾಂಧಿ ಅವರನ್ನೂ ತಲುಪಿತು. ಮರುದಿನ ರಾಹುಲ್ ಕಡೆಯಿಂದ ಕರೆ ಬಂದಾಗ ಕುಟುಂಬಕ್ಕೆ ಅಚ್ಚರಿಯೋ ಅಚ್ಚರಿ.

ಕೇರಳಕ್ಕೆ ಬಂದಾಗ ಭೇಟಿ ಮಾಡುವ ಭರವಸೆ ಆ ಕಡೆಯಿಂದ ಸಿಕ್ಕಿತು ಆದರೆ ಶನಿವಾರ ವಯನಾಡ್‌ಗೆ ಪ್ರಚಾರಕ್ಕೆ ಬಂದಿದ್ದ ಪ್ರಿಯಾಂಕಾ, ನಂದನ್ ಕುಟುಂಬವನ್ನು ಭೇಟಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.