ADVERTISEMENT

ಶಾಂತಿ, ಸಂಯಮದ ಸಂದೇಶ ನೀಡಿದ ಮಹಾವೀರ: ಪ್ರಧಾನಿ

ಪಿಟಿಐ
Published 25 ಏಪ್ರಿಲ್ 2021, 6:08 IST
Last Updated 25 ಏಪ್ರಿಲ್ 2021, 6:08 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ಮಹಾವೀರ ಅವರ ಜೀವನವು ನಮಗೆ ಶಾಂತಿ ಮತ್ತು ಸಂಯಮದ ಸಂದೇಶವನ್ನು ನೀಡುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದರು.

ಮಹಾವೀರ ಜಯಂತಿಯ ಅಂಗವಾಗಿ ಟ್ವೀಟ್‌ ಮಾಡಿರುವ ಅವರು, ‘ಕೊರೊನಾ ಬಿಕ್ಕಟ್ಟನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಎದುರಿಸೋಣ. ಮಹಾವೀರ ಅವರ ಆರ್ಶೀವಾದ ನಮ್ಮೆಲ್ಲರ ಮೇಲಿರಲಿ ಹಾಗೂ ಅವರು ಎಲ್ಲರ ಆರೋಗ್ಯವನ್ನು ಕಾಪಾಡಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಅವರು ಹೇಳಿದರು.

ಮಹಾವೀರ ಅವರು ಜೈನ ಧರ್ಮದ 24ನೇ ತೀರ್ಥಂಕರರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.