ADVERTISEMENT

ಕೊಲ್ಹೆ ಹತ್ಯೆ ‘ಸಂಚುಕೋರ’ ಜುಲೈ 7ರ ವರೆಗೆ ಪೊಲೀಸ್‌ ವಶಕ್ಕೆ

ಅಮರಾವತಿ ಜಿಲ್ಲಾ ನ್ಯಾಯಾಲಯ ಆದೇಶ

ಪಿಟಿಐ
Published 3 ಜುಲೈ 2022, 13:18 IST
Last Updated 3 ಜುಲೈ 2022, 13:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮರಾವತಿ (ಪಿಟಿಐ):ಮಹಾರಾಷ್ಟ್ರದ ಅಮರಾವತಿಯ ಔಷಧ ವ್ಯಾಪಾರಿ ಉಮೇಶ್‌ ಪ್ರಹ್ಲಾದರಾವ್ ಕೊಲ್ಹೆ ಅವರ ಹತ್ಯೆಯ ಸಂಚುಕೋರ ಎಂದು ಹೇಳಲಾದ ಇರ್ಫಾನ್‌ ಖಾನ್‌ ನನ್ನು ಜುಲೈ 7ರ ವರೆಗೂ ಪೊಲೀಸ್‌ ವಶಕ್ಕೆ ನೀಡಿ ಇಲ್ಲಿನ ನ್ಯಾಯಾಲಯ ಆದೇಶಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೇಖ್‌ ಇರ್ಫಾನ್‌ ಶೇಖ್‌ ರಹೀಮ್‌ ಅಲಿಯಾಸ್ ಇರ್ಫಾನ್‌ ಖಾನ್ ಪ್ರಕರಣದ ಏಳನೇ ಆರೋಪಿಯಾಗಿದ್ದು, ಶನಿವಾರ ನಾಗ್ಪುರದಲ್ಲಿ ಬಂಧಿಸಲಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಭಾನುವಾರ ನಗರದ ಕೊಟ್ವಾಲಿ ಪೊಲೀಸ್‌ ಠಾಣೆಯಲ್ಲಿ ಇರ್ಫಾನ್‌ ಖಾನ್‌ ವಿಚಾರಣೆ ನಡೆಸಿತು. ಬಳಿಕ ಬಿಗಿ ಭದ್ರತೆಯೊಂದಿಗೆ ಅಮರಾವತಿ ಜಿಲ್ಲಾ ನ್ಯಾಯಾಲಯದಲ್ಲಿ ಮುಂದೆ ಹಾಜರುಪಡಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.