ADVERTISEMENT

ಶೀಘ್ರವೇ ಮಹಾರಾಷ್ಟ್ರ ಸಂಪುಟ ವಿಸ್ತರಣೆ: ಸಿ.ಎಂ ಶಿಂದೆ

CM Shinde

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 14:18 IST
Last Updated 2 ಆಗಸ್ಟ್ 2022, 14:18 IST
ಪುಣೆ ಭೇಟಿ ವೇಳೆ ಮುಖ್ಯಮಂತ್ರಿ ಏಕನಾಥ ಶಿಂದೆ ಗೋಶಾಲೆಗೆ ಭೇಟಿ ನೀಡಿದರು –ಪಿಟಿಐ
ಪುಣೆ ಭೇಟಿ ವೇಳೆ ಮುಖ್ಯಮಂತ್ರಿ ಏಕನಾಥ ಶಿಂದೆ ಗೋಶಾಲೆಗೆ ಭೇಟಿ ನೀಡಿದರು –ಪಿಟಿಐ   

ಪುಣೆ (ಪಿಟಿಐ): ಪೂರ್ಣಪ್ರಮಾಣದ ಸಂಪುಟ ರಚನೆಯಾಗದಿದ್ದರೂ ಮಹಾರಾಷ್ಟ್ರ ಸರ್ಕಾರ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ಜನಪರವಾಗಿರುವ ಅನೇಕ ನಿರ್ಧಾರಗಳನ್ನು ಕೈಗೊಂಡಿದೆ. ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಮಂಗಳವಾರ ತಿಳಿಸಿದ್ದಾರೆ.

ಪುಣೆಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಶಿಂದೆ ಅವರು, ಐದು ಜಿಲ್ಲೆಗಳ ಅನೇಕ ಅಭಿವೃದ್ಧಿ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ನೂತನ ಸರ್ಕಾರ ಜಾರಿಗೆ ತಂದಿರುವ ಇಂಧನ ಬೆಲೆ ಇಳಿಕೆ, ಮೆಟ್ರೊ ಕಾರ್‌ ಶೆಡ್‌ ಸ್ಥಾಪನೆಗೆ ಅನುಮೋದನೆ ಮುಂತಾದ ನಿರ್ಧಾರಗಳನ್ನು ಸ್ಮರಿಸಿದರು.

ಸದ್ಯ ಮುಖ್ಯಮಂತ್ರಿ ಶಿಂದೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌ ಅವರು ಜೂನ್‌ 30ರಂದು ಪ್ರಮಾಣವಚನ ಸ್ವೀಕರಿಸಿದ್ದು, ಉಭಯ ನಾಯಕರು ಮಾತ್ರವೇ ಸಂಪುಟ ಸದಸ್ಯರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.