ADVERTISEMENT

ಕೋವಿಡ್‌ ಚಿಕಿತ್ಸೆ ಪಡೆದ ಶತಾಯುಷಿ ಗುಣಮುಖ

ಪಿಟಿಐ
Published 9 ಮೇ 2021, 6:04 IST
Last Updated 9 ಮೇ 2021, 6:04 IST
,
,   

ಪಾಲ್ಘಾರ್‌: ಮಹಾರಾಷ್ಟ್ರದ ಪಾಲ್ಘಾರ್‌ ಜಿಲ್ಲೆಯ ವೀರೇಂದ್ರ ನಗರದ ನಿವಾಸಿ ಹಾಗೂ ಶತಾಯುಷಿ ಶ್ಯಾಮರಾವ್ ಇಂಗ್ಳೆ (103) ಎಂಬುವವರು ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಇಂಗ್ಳೆ ಅವರನ್ನು ಪಾಲ್ಘಾರ್‌ರ ಗ್ರಾಮೀಣ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಅವರು ಮನೆಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಗುಣಮುಖರಾಗಿ ನಡೆದುಕೊಂಡೇ ಆಸ್ಪತ್ರೆಯಿಂದ ನಿರ್ಗಮಿಸಿದ ಈ ಶತಾಯುಷಿಗೆ ಪಾಲ್ಘಾರ್ ಜಿಲ್ಲಾಧಿಕಾರಿ ಡಾ.ಮಾಣಿಕ್‌ ಗುರ್ಸಲ್‌ ಮತ್ತು ಆಸ್ಪತ್ರೆಯ ಸಿಬ್ಬಂದಿ ಹೂಗುಚ್ಛ ನೀಡಿ ಬೀಳ್ಗೊಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.