ADVERTISEMENT

ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗೆ ಶೇ 27 ಮೀಸಲಾತಿಗೆ ತಡೆ ಪ್ರಶ್ನಿಸಿದ ಮಹಾರಾಷ್ಟ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜನವರಿ 2022, 10:13 IST
Last Updated 17 ಜನವರಿ 2022, 10:13 IST
ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗೆ ಶೇ 27 ಮೀಸಲಾತಿಗೆ ತಡೆ ಪ್ರಶ್ನಿಸಿದ ಮಹಾರಾಷ್ಟ್ರ
ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗೆ ಶೇ 27 ಮೀಸಲಾತಿಗೆ ತಡೆ ಪ್ರಶ್ನಿಸಿದ ಮಹಾರಾಷ್ಟ್ರ   

ನವದೆಹಲಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗಗಳು ಅಥವಾ ಒಬಿಸಿಗೆ ಶೇ 27ರಷ್ಟು ಮೀಸಲಾತಿ ಆದೇಶಕ್ಕೆ ತಡೆ ವಿಧಿಸಿ ಡಿಸೆಂಬರ್ 15ರಂದು ನ್ಯಾಯಾಲಯ ನೀಡಿದ್ದ ಆದೇಶವನ್ನು ಹಿಂಪಡೆಯುವಂತೆ ಕೋರಿ ಮಹಾರಾಷ್ಟ್ರ ಸರಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

ಒಬಿಸಿಗೆ ನೀಡಲಾಗಿದ್ದ ಶೇ 27 ರಷ್ಟು ಮೀಸಲಾತಿಯನ್ನು ಸಾಮಾನ್ಯ ವರ್ಗಕ್ಕೆ ಮರಳಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.

ಕೋಟಾವನ್ನು ನೀಡುವಾಗ ರಾಜ್ಯ ಸರ್ಕಾರವು‘ಟ್ರಿಪಲ್ ಟೆಸ್ಟ್ಸ್’ಕಡ್ಡಾಯ ಮಾನದಂಡಗಳನ್ನು ಅನುಸರಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ADVERTISEMENT

‘ಟ್ರಿಪಲ್ ಟೆಸ್ಟ್’ಮಾರ್ಗಸೂಚಿಗಳ ಗುಚ್ಛವನ್ನು ಉಲ್ಲೇಖಿಸುತ್ತವೆ. ಇವುಗಳಲ್ಲಿ ಒಂದು ರಾಜ್ಯದೊಳಗೆ ಮೀಸಲಾತಿ ಹೆಚ್ಚಿಸುವ ಮೊದಲು ಪ್ರಾಯೋಗಿಕ ವಿಚಾರಣೆ ನಡೆಸಲು ಆಯೋಗದ ಸ್ಥಾಪನೆ ಮಾಡುವುದೂ ಸೇರಿದೆ.

ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಒಬಿಸಿಗಳಿಗೆ ಮೀಸಲಾದ ಒಟ್ಟು ಶೇಕಡ 50 ರಷ್ಟನ್ನು ಮೀರುವಂತಿಲ್ಲ ಎಂದು ಕಳೆದ ವರ್ಷ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.

ಇದೀಗ, ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 19ರಂದು ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.