ADVERTISEMENT

ಕೋರ್ಟ್‌ನಲ್ಲಿ ನೆಹರೂ ಸುಳ್ಳು ಹೇಳಿಲ್ಲ: ಮಹುವಾ ಮೊಯಿತ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮೇ 2022, 13:46 IST
Last Updated 11 ಮೇ 2022, 13:46 IST
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ   

ಬೆಂಗಳೂರು: 'ಜವಾಹರಲಾಲ್‌ ನೆಹರೂ ಅವರು ಮಾಡದೇ ಇದ್ದುದನ್ನು ಪ್ರಸಕ್ತ ಕೇಂದ್ರ ಸರ್ಕಾರ ಮಾಡುತ್ತಿದೆ' ಎಂಬ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿಕೆಗೆ ಟ್ವೀಟ್‌ ಮೂಲಕ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಚಾಟಿ ಬೀಸಿದ್ದಾರೆ.

'ನೀವು ಹೇಳುತ್ತಿರುವುದು ನಿಜ ಸರ್‌, ನೆಹರೂ ಕೋರ್ಟ್‌ನಲ್ಲಿ ಸುಳ್ಳು ಹೇಳಿಲ್ಲ, ರಾಷ್ಟ್ರದ ಜನರ ಮೇಲೆ ಬೇಹುಗಾರಿಕೆ ನಡೆಸಿಲ್ಲ, ಮುಗ್ಧರನ್ನು ಬಂಧಿಸಿಲ್ಲ, ಪ್ರಕರಣಗಳನ್ನು ಇತ್ಯರ್ಥ ಪಡಿಸದೆ ಬಾಕಿ ಉಳಿಸಿಕೊಂಡು ಭಿನ್ನಮತೀಯರನ್ನು ಜೈಲಿನೊಳಗೆ ಇಟ್ಟಿಲ್ಲ. ಈ ಪಟ್ಟಿ ತುಂಬಾ ಉದ್ದವಿದೆ' ಎಂದು ಮಹುವಾ ಮೊಯಿತ್ರಾ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT