*ನೆರೆ ರಾಜ್ಯ ಕೇರಳದಲ್ಲಿ ಮಾರ್ಚ್ 31ರವರೆಗೆ ಲಾಕ್ಡೌನ್. ಗಡಿಯಲ್ಲಿರುವ ರಸ್ತೆಗಳು ಸಂಪೂರ್ಣ ಬಂದ್. ಸರ್ಕಾರಿ ಹಾಗೂ ಖಾಸಗಿ ಬಸ್ಗಳ ಓಡಾಟಕ್ಕೆ ನಿರ್ಬಂಧ. ಖಾಸಗಿ ವಾಹನಗಳಿಗೆ ವಿನಾಯಿತಿ.
*ಈಶಾನ್ಯ ಭಾರತ ಜನರನ್ನು ಸೋಂಕಿತರು ಎಂದು ಹೀಯಾಳಿಸಿ ಪೀಡಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರಗಳಿಗೆ ಸೂಚಿಸಿದ ಕೇಂದ್ರ ಗೃಹ ಸಚಿವಾಲಯ. ದೆಹಲಿಯಲ್ಲಿ ಮಣಿಪುರ ಮೂಲದ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಉಗಿದು, ಕೊರೊನಾ ಎಂದು ಕರೆದ ಘಟನೆ ಬೆನ್ನಲ್ಲೇ ಕೇಂದ್ರದ ಕ್ರಮ
*ಬಡವರಿಗೆ ಉಚಿತ ಆಹಾರ ಹಾಗೂ ಔಷಧಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹20 ಕೋಟಿ ಮಂಜೂರು ಮಾಡಿದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್. ಪರಿಹಾರ ನಿಧಿಗೆ ಒಂದು ತಿಂಗಳ ವೇತನ ನೀಡುವುದಾಗಿ ಘೋಷಿಸಿದ ಪಂಜಾಬ್ ಸಚಿವರು. ಪಂಜಾಬ್ ಐಎಎಸ್ ಅಧಿಕಾರಿಗಳೂ ನಿಧಿಗೆ ಒಂದು ತಿಂಗಳ ವೇತನ ನೀಡಲಿದ್ದಾರೆ
*ಪುದುಚೇರಿಯಲ್ಲೂ ಮಾರ್ಚ್ 31ರವರೆಗೆ ‘ಕರ್ಫ್ಯೂ’ ಹೇರಿಕೆ; ಮುಖ್ಯಮಂತ್ರಿ ವಿ. ನಾರಾಯಣಸಾಮಿ ಘೋಷಣೆ
*ಮಾರ್ಚ್ 24ರಿಂದ ಮುಂದಿನ ಆದೇಶದವರೆಗೆ ಏಮ್ಸ್ ಆಸ್ಪತ್ರೆ ಹೊರರೋಗಿ ವಿಭಾಗ ಬಂದ್. ಆಸ್ಪತ್ರೆ ಆವರಣದಲ್ಲಿ ಹೆಚ್ಚಿನ ಜನರು ಸೇರಬಾರದು ಎನ್ನುವ ಉದ್ದೇಶದಿಂದ ಕ್ರಮ
*ಸಿಆರ್ಪಿಸಿ ಸೆಕ್ಷನ್ 144 ಹಾಕಿದರೂ, ಮುಂಬೈನ ರಸ್ತೆಗಳಲ್ಲಿ ಜನರ ಓಡಾಟ. ಕೋವಿಡ್ 19 ವಿರುದ್ಧದ ಹೋರಾಟವನ್ನು ಗಂಭೀರವಾಗಿ ಪರಿಗಣಿಸುವಂತೆ ಜನರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕರೆ
*ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳಕ್ಕೆ ಇತರೆ ರಾಜ್ಯಗಳಿಂದ ಆಗಮಿಸುವ ವಿಮಾನಗಳನ್ನು ಸ್ಥಗಿತಗೊಳಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ. ಪ್ರಧಾನಿ ಪತ್ರ ಬರೆದ ಮುಖ್ಯಮಂತ್ರಿ
*ರಾಜ್ಯದಾದ್ಯಂತ 350 ‘ಕಿಚಿಡಿ’ ಕೇಂದ್ರಗಳನ್ನು ತೆರೆಯುವುದಾಗಿ ಜಾರ್ಖಂಡ್ ಸರ್ಕಾರದ ಘೋಷಣೆ. ಲಾಕ್ಡೌನ್ ಸಂದರ್ಭದಲ್ಲಿ ಬಡವರಿಗೆ ಈ ಕೇಂದ್ರಗಳಲ್ಲಿ ಊಟದ ವ್ಯವಸ್ಥೆ
*ಸೋಮವಾರ ಮೂರು ಪ್ರಕರಣಗಳ ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬಡೆ ಹಾಗೂ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರಿದ್ದ ನ್ಯಾಯಪೀಠ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.