ADVERTISEMENT

ನಾನು ಚುನಾಯಿತ ಮುಖ್ಯಮಂತ್ರಿ: ಮಮತಾ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 20:15 IST
Last Updated 23 ಏಪ್ರಿಲ್ 2020, 20:15 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ‘ನಾನು ಚುನಾಯಿತ ಮುಖ್ಯಮಂತ್ರಿ, ನೀವು ನಾಮನಿರ್ದೇಶಿತ ರಾಜ್ಯಪಾಲರು ಎಂಬುದು ನೆನಪಿರಲಿ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯಪಾಲ ಜಗದೀಪ್‌ ಧನಕರ್ ಅವರಿಗೆ ಗುರುವಾರ ಖಾರವಾಗಿ ಪತ್ರ ಬರೆದಿದ್ದಾರೆ.

‘ನಾನು ದೇಶದ ಹೆಮ್ಮೆಯ ರಾಜ್ಯವೊಂದರ ಮುಖ್ಯಮಂತ್ರಿ ಎಂಬುದನ್ನೇ ನೀವು ಮರೆತಂತೆ ಕಾಣುತ್ತದೆ. ನೀವೊಬ್ಬ ನಾಮನಿರ್ದೇಶಿತ ರಾಜ್ಯಪಾಲರು ಎಂಬುದನ್ನು ಮರೆತಿರಬಹುದು’ ಎಂದು ಅವರು ವ್ಯಂಗ್ಯವಾಡಿದ್ದಾರೆ.

‘ನನ್ನ ಮತ್ತು ನನ್ನ ಸಚಿವ ಸಂಪುಟದ ಸದಸ್ಯರ ಮೇಲೆ ನೇರವಾಗಿ ದಾಳಿ ಮಾಡುತ್ತಿದ್ದೀರಿ. ನನ್ನ ಆಡಳಿತದಲ್ಲಿ ನಿಮ್ಮ ಹಸ್ತಕ್ಷೇಪ ಹೆಚ್ಚುತ್ತಿದೆ’ ಎಂದೂ ಅವರು ‍ಪತ್ರದಲ್ಲಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.