ADVERTISEMENT

ಇಬ್ಬರು ಪುರೋಹಿತರ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ

ಪಿಟಿಐ
Published 20 ಜನವರಿ 2022, 4:04 IST
Last Updated 20 ಜನವರಿ 2022, 4:04 IST
ಉತ್ತರ ಪ್ರದೇಶದಲ್ಲಿ ಇಬ್ಬರು ಪುರೋಹಿತರನ್ನು ಹತ್ಯೆ ಮಾಡಲಾಗಿತ್ತು.
ಉತ್ತರ ಪ್ರದೇಶದಲ್ಲಿ ಇಬ್ಬರು ಪುರೋಹಿತರನ್ನು ಹತ್ಯೆ ಮಾಡಲಾಗಿತ್ತು.   

ಬುಲಂದ್‌ಶಹರ್(ಉತ್ತರ ಪ್ರದೇಶ): ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಪುರೋಹಿತರನ್ನು ಹತ್ಯೆ ಮಾಡಿದ್ದ ವ್ಯಕ್ತಿಗೆ ಬುಲಂದ್‌ಶಹರ್‌ನ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಕೋರ್ಟ್ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಅನೂಪ್‌ಶಹರ್ ಪೊಲೀಸ್ ಠಾಣಾ ವ್ಯಾಪ್ತಿಯ ಶಿವ ದೇಗುಲದಲ್ಲಿ ವಾಸವಿದ್ದ ಜಗದೀಶ್ ದಾಸ್ ಮತ್ತು ಸೇವಾ ದಾಸ್ ಎಂಬ ಇಬ್ಬರು ಪುರೋಹಿತರನ್ನು ಮುರಾರಿ ಎಂಬವರು ಇರಿದು ಹತ್ಯೆ ಮಾಡಿದ್ದರು.

ದೇಗಲದ ಬಳಿ ಕಳ್ಳತನಕ್ಕೆ ಯತ್ನಿಸಿದ್ದ ಮುರಾರಿಗೆ ಪುರೋಹಿತರು ಎಚ್ಚರಿಕೆ ನೀಡಿದ್ದರು.

ADVERTISEMENT

ಇದರಿಂದ ಕೋಪಗೊಂಡಿದ್ದ ಮುರಾರಿ, 2020ರ ಏಪ್ರಿಲ್ 28ರಂದು ದೇಗುಲದ ಆವರಣದಲ್ಲೇ ಇಬ್ಬರು ಪುರೋಹಿತರನ್ನು ಹತ್ಯೆ ಮಾಡಿದ್ದರು.

ಹತ್ಯೆ ಬಳಿಕ ಪರಾರಿಯಾಗಲು ಯತ್ನಿಸಿದ್ದ ಮುರಾರಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಮುರಾರಿಗೆ ನ್ಯಾಯಾಧೀಶರು ₹20,000 ದಂಡ ಕೂಡ ವಿಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.