ADVERTISEMENT

ಕೇಂದ್ರ ಸಚಿವರಿಗೆ ಕೊಲೆ ಬೆದರಿಕೆ: ಬಿಹಾರದಲ್ಲಿ ವ್ಯಕ್ತಿಯ ಬಂಧನ

ಪಿಟಿಐ
Published 14 ಫೆಬ್ರುವರಿ 2023, 11:34 IST
Last Updated 14 ಫೆಬ್ರುವರಿ 2023, 11:34 IST
.
.   

ಹಾಜಿಪುರ, ಬಿಹಾರ (ಪಿಟಿಐ): ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಅವರಿಗೆ ವಿಡಿಯೊ ಮೂಲಕ ಕೊಲೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ಮಂಗಳವಾರ ಟೌನ್‌ ಪೊಲೀಸ್‌ ಠಾಣೆಯ ಪೊಲೀಸರು ಮಾಧವ್‌ ಝಾ (25) ಎಂಬಾತನನ್ನು ಬಂಧಿಸಿದ್ದಾರೆ’ ಎಂದು ವೈಶಾಲಿ ಎಸ್‌ಪಿ ಕುಮಾರ್‌ ಮನೀಶ್‌ ಅವರು ಹೇಳಿದರು.

ಮಹಾಶಿವರಾತ್ರಿ ಪ್ರಯುಕ್ತ ಈ ವಾರಾಂತ್ಯದಲ್ಲಿ ನಿತ್ಯಾನಂದ ರಾಯ್‌ ಅವರು ಮೆರವಣಿಗೆಯೊಂದರಲ್ಲಿ ಪಾಲ್ಗೊಳ್ಳಬೇಕಿತ್ತು. ಈ ಕುರಿತು ವಿಡಿಯೊ ಮಾಡಿದ್ದ ಮಾಧವ್‌, ಮೆರವಣಿಗೆ ವೇಳೆ ನಿತ್ಯಾನಂದ ಅವರ ಮೇಲೆ ಎರಡು ಗುಂಡು ಹಾರಿಸುವುದಾಗಿ ಹೇಳಿದ್ದ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ADVERTISEMENT

‘ಸಚಿವರನ್ನು ಕೊಲ್ಲುವ ಕನಸು ಕಂಡು, ಅದನ್ನೇ ವಿಡಿಯೊದಲ್ಲಿ ಬಹಿರಂಗಪಡಿಸಿದ್ದಾಗಿ ಆರೋಪಿ ಹೇಳುತ್ತಿದ್ದಾನೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ’ ಎಂದು ಕುಮಾರ್‌ ಮನೀಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.