ಜೈಪುರ (ರಾಜಸ್ಥಾನ): ಎರಡು ಗುಂಪುಗಳ ನಡುವಿನ ಜಗಳ ವಿಕೋಪಕ್ಕೆ ಹೋಗಿ, ಪರಸ್ಪರರು ಗುಂಡು ಹಾರಿಸಿದ ಪರಿಣಾಮ ಒಬ್ಬ ಮೃತಪಟ್ಟು, ಮತ್ತೊಬ್ಬ ಗಾಯಗೊಂಡಿದ್ದಾರೆ.
ಕರಣ್ ಸಿಂಗ್ ರಜಪೂತ್ (25) ಎಂಬುವವರು ಮೃತಪಟ್ಟಿದ್ದು, ಜತಿನ್ ಎಂಬುವವರಿಗೆ ಗಾಯಗಳಾಗಿವೆ ಎಂದು ಆರೈ ಪೊಲೀಸ್ ಠಾಣೆ ಅಧಿಕಾರಿ ಗುಮನ್ ಸಿಂಗ್ ಹೇಳಿದ್ದಾರೆ.
ಜತಿನ್ ಜಾಟ್, ಭಾಗಚಂದ್ ಜಾಟ್ ಹಾಗೂ ರಾಜೇಶ್ ಎಂಬುವವರು ಊಟಕ್ಕಾಗಿ ಶನಿವಾರ ರಾತ್ರಿ ರಸ್ತೆ ಬದಿಯ ರೆಸ್ಟೋರೆಂಟ್ಗೆ ತೆರಳಿದ್ದರು. ಆಗ, 3–4 ಜನರಿದ್ದ ಗುಂಪು ಹಾಗೂ ಇವರ ನಡುವೆ ಜಗಳವಾಗಿದೆ. ಗುಂಪಿನಲ್ಲಿದ್ದವರ ಪೈಕಿ ಒಬ್ಬಾತ ಗುಂಡು ಹಾರಿಸಿದಾಗ ಜತಿನ್ಗೆ ಗಾಯಗಳಾದವು. ಇದಕ್ಕೆ ಪ್ರತಿಯಾಗಿ ಜತಿನ್ ಕಡೆಯವರೂ ಹಾರಿಸಿದ ಗುಂಡು ತಗುಲಿ ಕರಣ್ ಸಿಂಗ್ ಎಂಬುವರು ಮೃತಪಟ್ಟರು ಎಂದು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಂತರ ಕುಟುಂಬ ಸದಸ್ಯರಿಗೆ ಮೃತದೇಹವನ್ನು ಭಾನುವಾರ ಹಸ್ತಾಂತರಿಸಲಾಗಿದೆ. ಪ್ರಕರಣ ಸಂಬಂಧ ಈ ವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.