ADVERTISEMENT

ಆರ್‌ಎಸ್‌ಎಸ್‌ ಮುಖಂಡನ ಮನೆ ಮೇಲೆ ಪೆಟ್ರೋಲ್‌ ಬಾಂಬ್‌ ಎಸೆತ ಪ್ರಕರಣ, ಒಬ್ಬನ ಬಂಧನ

ಪಿಟಿಐ
Published 8 ಮಾರ್ಚ್ 2023, 14:56 IST
Last Updated 8 ಮಾರ್ಚ್ 2023, 14:56 IST
-
-   

ಕೊಯಮತ್ತೂರು: ಆರ್‌ಎಸ್‌ಎಸ್‌ ಮುಖಂಡರೊಬ್ಬರ ಇಲ್ಲಿನ ಮನೆಯ ಮೇಲೆ ಪೆಟ್ರೋಲ್‌ ಬಾಂಬ್ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ‍ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮೊಹಮ್ಮದ್‌ ಶಫಿ ಬಂಧಿತ ಆರೋಪಿ. ಬಂಧಿತನ ಇಬ್ಬರು ಸಹಚರರಿಗಾಗಿ ಶೋಧ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೋವೈಪುದೂರು ಎಂಬಲ್ಲಿ ಕಳೆದ ವರ್ಷ ಸೆಪ್ಟೆಂಬರ್ 22ರಂದು ಈ ಘಟನೆ ನಡೆದಿತ್ತು. ಪಿಎಫ್‌ಐ ನಿಷೇಧಿಸಿದ ಬೆನ್ನಲ್ಲೇ ಒಟ್ಟು ಆರು ಕಡೆಗಳಲ್ಲಿ ಕಲ್ಲು ತೂರಾಟ ಹಾಗೂ ಬಾಂಬ್‌ ಎಸೆದ ಘಟನೆಗಳು ನಡೆದಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.