ADVERTISEMENT

ಮಣಿಪುರದಲ್ಲಿ ಮುಂದುವರಿದ ಪ್ರತಿಭಟನೆ: ಇಬ್ಬರು ಪೊಲೀಸರಿಗೆ ಗಾಯ

10 ದಿನದ ಬಂದ್ 3 ದಿನಕ್ಕೆ ಇಳಿಸಿದ ಮೈತೇಯಿ

ಪಿಟಿಐ
Published 10 ಜೂನ್ 2025, 14:32 IST
Last Updated 10 ಜೂನ್ 2025, 14:32 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ಇಂಫಾಲ್‌: ಸಿಬಿಐ ಬಂಧಿಸಿರುವ ಅರಂಬಾಯ್‌ ಟೆಂಗೋಲ್ ನಾಯಕ ಕನನ್‌ ಸಿಂಗ್ ಮತ್ತು ನಾಲ್ವರು ನಾಯಕರ ಬೇಷರತ್‌ ಬಿಡುಗಡೆಗೆ ಒತ್ತಾಯಿಸಿ ಮಣಿಪುರದಲ್ಲಿ ಮೈತೇಯಿ ಸಮುದಾಯ ಶನಿವಾರದಿಂದ ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ.

ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪ್ರತಿಭಟನಕಾರರು ಹಲವು ಜಿಲ್ಲೆಗಳಲ್ಲಿ ಹಿಂಸಾಚಾರ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿ ಜೊತೆ ಸಂಘರ್ಷವನ್ನೂ ನಡೆಸಿದ್ದಾರೆ ಎಂದು ಮಂಗಳವಾರ ಪೊಲೀಸರು ತಿಳಿಸಿದರು.

ADVERTISEMENT

ತೌಬಾಲ್ ಮತ್ತು ಕಾಕ್‌ಚಿಂಗ್‌ ಜಿಲ್ಲೆಗಳಲ್ಲಿ ಪ್ರತಿಭಟನಕಾರರು ಟೈರ್‌ಗಳಿಗೆ ಬೆಂಕಿ ಹಚ್ಚಿ ರಸ್ತೆಗಳನ್ನು ತಡೆದರು. ಪಶ್ಚಿಮ ಇಂಫಾಲ್‌ನ ಟೆರಾ ಪ್ರದೇಶದಲ್ಲಿ ಕೆಲ ಅಪರಿಚಿತ ದುಷ್ಕರ್ಮಿಗಳು ಸೋಮವಾರ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್‌) ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದರು.

ಬಿಷ್ಣುಪುರ ಜಿಲ್ಲೆಯ ನ್ಯಾಂಬೋಲ್‌ನಲ್ಲಿ ಎಸ್‌ಪಿ ನೇತೃತ್ವದ ತಂಡ ಗುಂಪು ಚದುರಿಸುವಾಗ ಪ್ರತಿಭಟನಕಾರರ ಜೊತೆ ನಡೆದ ಸಂಘರ್ಷದಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಇಂಫಾಲ್‌ನ ರಸ್ತೆಗಳಲ್ಲಿ ವಾಣಿಜ್ಯ ಚಟುವಟಿಕೆ ಕಂಡು ಬಂತು. ರಸ್ತೆ ಬದಿ ವ್ಯಾಪಾರಿಗಳು ಅಂಗಡಿ ತೆರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.