ADVERTISEMENT

ಮನೋಜ್‌ ತಿವಾರಿಗೆ ಕೊಲೆ ಬೆದರಿಕೆ

ಪಿಟಿಐ
Published 23 ಜೂನ್ 2019, 19:13 IST
Last Updated 23 ಜೂನ್ 2019, 19:13 IST
   

ನವದೆಹಲಿ: ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್‌ ತಿವಾರಿ ಅವರ ವೈಯಕ್ತಿಕ ಮೊಬೈಲ್ ನಂಬರ್‌ಗೆ ಕೊಲೆಬೆದರಿಕೆ ಒಡ್ಡಿರುವ ಸಂದೇಶವೊಂದು ಬಂದಿದೆ.

‘ನಿಮ್ಮನ್ನು ಕೊಲೆ ಮಾಡುವುದಕ್ಕೆ ನನ್ನ ಮೇಲೆ ತೀವ್ರ ಒತ್ತಡ ಇದೆ. ಅಗತ್ಯಬಿದ್ದರೆ ಪ್ರಧಾನಿಯನ್ನೂ ಕೊಲ್ಲುತ್ತೇನೆ’ ಎಂದು ಅಪರಿಚಿತ ವ್ಯಕ್ತಿ ಸಂದೇಶದಲ್ಲಿ ಹೇಳಿದ್ದಾನೆ.ಮತ್ತೊಂದು ಸಂದೇಶದಲ್ಲಿ ಕೊಲೆ ಬೆದರಿಕೆ ಒಡ್ಡಿದ್ದಕ್ಕಾಗಿ ಕ್ಷಮೆಯನ್ನೂ ಅಪರಿಚಿತ ಕೇಳಿದ್ದಾನೆ.

‘ಕೊಲೆ ಬೆದರಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ’ ಎಂದು ಮನೋಜ್ ತಿವಾರಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.