ADVERTISEMENT

ವಲಸೆ ಕಾರ್ಮಿಕನ ಮೃತದೇಹ ಪತ್ತೆ

ಪಿಟಿಐ
Published 1 ಜೂನ್ 2020, 19:30 IST
Last Updated 1 ಜೂನ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭುವನೇಶ್ವರ: ‘ವಲಸೆ ಕಾರ್ಮಿಕರೊಬ್ಬರ ಮೃತದೇಹವು ಕಟಕ್‌ ಜಿಲ್ಲೆಯ ಕ್ವಾರಂಟೈನ್‌ ಕೇಂದ್ರವೊಂದರ ಬಳಿ ಪತ್ತೆಯಾಗಿದೆ’ ಎಂದು ಪೊಲೀಸರು ಸೋಮವಾರ ತಿಳಿಸಿದರು.

‘ಮೃತ ವಲಸೆ ಕಾರ್ಮಿಕನನ್ನು ಬ್ರಜಬಂಧು ರಾಣಾ (40) ಎಂದು ಗುರುತಿಸಲಾಗಿದೆ. ಇವರು ಒಡಿಶಾದ ಕೃಷ್ಣಾಪುರ ಗ್ರಾಮದವರು. ಮುಂಬೈನಿಂದ ಬಂದ ಇವರನ್ನು ಮೇ 26ರಿಂದ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು’ ಎಂದರು.

‘ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಾವಿನ ಕಾರಣ ತನಿಖೆ ಪ್ರಾರಂಭಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.