ADVERTISEMENT

PM Modi In Manipur: ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು

ಪಿಟಿಐ
Published 13 ಸೆಪ್ಟೆಂಬರ್ 2025, 16:19 IST
Last Updated 13 ಸೆಪ್ಟೆಂಬರ್ 2025, 16:19 IST
<div class="paragraphs"><p>ಮಣಿಪುರ ಜನಾಂಗೀಯ ಹಿಂಸಾಚಾರದಲ್ಲಿ ಸಂತ್ರಸ್ತರಾಗಿ ಪರಿಹಾರದ ಶಿಬಿರದಲ್ಲಿ ನೆಲಸಿರುವ ಜನರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಚುರಚಾಂದಪುರದಲ್ಲಿ ಶನಿವಾರ ಮಾತುಕತೆ ನಡೆಸಿದರು </p></div>

ಮಣಿಪುರ ಜನಾಂಗೀಯ ಹಿಂಸಾಚಾರದಲ್ಲಿ ಸಂತ್ರಸ್ತರಾಗಿ ಪರಿಹಾರದ ಶಿಬಿರದಲ್ಲಿ ನೆಲಸಿರುವ ಜನರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಚುರಚಾಂದಪುರದಲ್ಲಿ ಶನಿವಾರ ಮಾತುಕತೆ ನಡೆಸಿದರು

   

ಚುರಚಾಂದಪುರ/ಇಂಫಾಲ್‌: ಗಲಭೆ, ಹಿಂಸಾಚಾರವನ್ನು ದೂರವಿಡುವಂತೆ ಮಣಿಪುರದ ವಿವಿಧ ಸಂಘಟನೆಗಳಿಗೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಎಲ್ಲ ಸಂಘಟನೆಗಳು ಶಾಂತಿ ಮಾರ್ಗ ಕಂಡುಕೊಳ್ಳಬೇಕು ಎಂದು ಶನಿವಾರ ಹೇಳಿದರು. 


ಮೋದಿ ಭಾಷಣದ ಪ್ರಮುಖಾಂಶಗಳು

  • ಹಿಂಸಾಚಾರದಿಂದ ಸ್ಥಳಾಂತರಗೊಂಡ ಸಂತ್ರಸ್ತರ ಕುಟುಂಬಗಳಿಗೆ 7000 ಹೊಸ ಮನೆಗಳನ್ನು ನಿರ್ಮಿಸಲು ನೆರವು ನೀಡಲಾಗುವುದು 

    ADVERTISEMENT
  • ಇತ್ತೀಚೆಗೆ ₹3000 ಕೋಟಿ ವಿಶೇಷ ಪ್ಯಾಕೇಜ್‌ ಅನುಮೋದಿಸಲಾಗಿದೆ. ಸಂತ್ರಸ್ತರ ನೆರವಿಗೆ ನಿರ್ದಿಷ್ಟವಾಗಿ ₹500 ಕೋಟಿ ನಿಗದಿಪಡಿಸಲಾಗಿದೆ 

  • ಹಿಂದೆ ದೆಹಲಿಯಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಮಣಿಪುರಕ್ಕೆ ತಲುಪಲು ದಶಕಗಳೇ ಬೇಕಾಗುತ್ತಿತ್ತು. ಆದರೆ ಈಗ ತ್ವರಿತವಾಗಿ ತಲುಪುತ್ತಿವೆ. ಇದರ ಪರಿಣಾಮ ದೇಶದ ಇತರ ಭಾಗಗಳಂತೆ ಮಣಿಪುರ ಸಹ ಪ್ರಗತಿ ಪಥದತ್ತ ಸಾಗಿದೆ 

  • ಹಿಂದೆ ಇಲ್ಲಿನ ಬೆಟ್ಟ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಉತ್ತಮ ಶಾಲೆ ಆಸ್ಪತ್ರೆಗಳು ಕನಸಾಗಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಚುರಚಾಂದಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗಿದೆ

  • ರಾಜ್ಯದಲ್ಲಿ ಎಂಟು ವರ್ಷಗಳ ಹಿಂದೆ ಕೊಳವೆ ನೀರಿನ ಸಂಪರ್ಕವನ್ನು ಕೇವಲ 30000 ಮನೆಗಳು ಪಡೆದಿದ್ದವು. ಈಗ 3.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ.

  •   ಮಣಿಪುರದ ಹೆಸರಿನಲ್ಲಿ ‘ಮಣಿ’ ಇದೆ. ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಫಲವಾಗಿ ಇದು ಮುಂದಿನ ದಿನಗಳಲ್ಲಿ ಹೊಳೆಯುವ ‘ರತ್ನ’ವಾಗಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.