ADVERTISEMENT

ಮೂಸೆವಾಲಾ ಹತ್ಯೆ: ಬಿಷ್ಣೋಯಿ ವಿಚಾರಣೆಗೆ ನಿರ್ಧಾರ

ಮೂಸೆವಾಲಾ ಹತ್ಯೆಯಲ್ಲಿ ಬಿಷ್ಣೋಯ್ ಗ್ಯಾಂಗ್‌ ಪಾತ್ರ ಇರುವ ಶಂಕೆ

ಪಿಟಿಐ
Published 1 ಜೂನ್ 2022, 12:59 IST
Last Updated 1 ಜೂನ್ 2022, 12:59 IST
ಸಿಧು ಮೂಸೆವಾಲಾ –ಪಿಟಿಐ
ಸಿಧು ಮೂಸೆವಾಲಾ –ಪಿಟಿಐ   

ಚಂಡೀಗಡ: ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಸಂಬಂಧ ಬಂಧಿತ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಅವರನ್ನು ಪಂಜಾಬಿಗೆ ಕರೆತಂದು ವಿಚಾರಣೆ ನಡೆಸಲಾಗುವುದು ಎಂದು ಪಂಜಾಬ್‌ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಆರೋಪ ಸಂಬಂಧಬಿಷ್ಣೋಯಿ ಅವರನ್ನು ದೆಹಲಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಮೂಸೆವಾಲಾ ಹತ್ಯೆಯಲ್ಲೂ ಬಿಷ್ಣೋಯಿ ಗ್ಯಾಂಗ್‌ ಪಾತ್ರ ಇರುವುದಾಗಿ ಪೊಲೀಸರು ಶಂಕಿಸಿದ್ದಾರೆ.

ಖ್ಯಾತ ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್‌ ನಾಯಕ ಮೂಸೆವಾಲಾ ಅವರನ್ನು ಭಾನುವಾರ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.