ADVERTISEMENT

ಭಾರತ ಆರೋಗ್ಯ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿದೆ: ಮುಖ್ತಾರ್ ಅಬ್ಬಾಸ್ ನಖ್ವಿ

ಪಿಟಿಐ
Published 17 ಆಗಸ್ಟ್ 2020, 10:51 IST
Last Updated 17 ಆಗಸ್ಟ್ 2020, 10:51 IST
ನಖ್ವಿ ಅವರಿಂದ ಮೊಬೈಲ್‌ ಕ್ಲಿನಿಕ್‌ ಉದ್ಘಾಟನೆ
ನಖ್ವಿ ಅವರಿಂದ ಮೊಬೈಲ್‌ ಕ್ಲಿನಿಕ್‌ ಉದ್ಘಾಟನೆ   

ನವದೆಹಲಿ: ಕಳೆದ ಆರು ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ದೇಶದಲ್ಲಿ ಕೊರೊನಾ ವೈರಸ್‌ ಅನ್ನು ನಿಯಂತ್ರಿಸುವಲ್ಲಿ ಭಾರತ ಸಫಲವಾಗಿದೆ ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಅವರು ಸೋಮವಾರ ಹೇಳಿದರು.

ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮವು (ಎನ್‌ಎಮ್‌ಡಿಎಫ್‌ಸಿ) ಇಲ್ಲಿನ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಹೊಸ ಮೊಬೈಲ್‌ ಕ್ಲಿನಿಕ್‌ ಸೇವೆಯನ್ನು ಆರಂಭಿಸಿದೆ.

ಸೋಮವಾರ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದಅಬ್ಬಾಸ್ ನಖ್ವಿ ಅವರು, ಜನರ ಶ್ರಮ ಮತ್ತು ಸರ್ಕಾರದ ಬಲವಾದ ಇಚ್ಛಾ ಶಕ್ತಿಯಿಂದಾಗಿ ಇಂದು ಭಾರತ ಆರೋಗ್ಯ ಕ್ಷೇತ್ರದಲ್ಲಿ ಸ್ವಾಲಂಬಿಯಾಗಿದೆ ಎಂದರು.

ADVERTISEMENT

‘ಭಾರತವು ಎನ್ -95 ಮುಖಗವಸು, ಪಿಪಿಇ ಕಿಟ್‌, ವೆಂಟಿಲೇಟರ್‌ಗಳು ಮತ್ತು ಇತರ ಉಪಕರಣಗಳ ತಯಾರಿಕೆಯಲ್ಲಿ ಸ್ವಾವಲಂಬಿಯಾಗಿರುವುದು ಮಾತ್ರವಲ್ಲದೆ ಇತರ ದೇಶಗಳಿಗೂ ಸಹಾಯ ಮಾಡಿದೆ’ ಎಂದು ನಖ್ವಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.