ಮುಂಬೈ: ಗಣೇಶ ಚತುರ್ಥಿಯ ಐದನೇ ದಿನವಾದ ಭಾನುವಾರ ಮುಂಬೈನಲ್ಲಿ ಕನಿಷ್ಠ 166 ಮೂರ್ತಿಗಳನ್ನು ಸಮುದ್ರದಲ್ಲಿ ಮತ್ತು ಕೃತಕ ಕೊಳಗಳಲ್ಲಿ ವಿಸರ್ಜನೆ ಮಾಡಲಾಯಿತು ಎಂದುಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳು ತಿಳಿಸಿದರು.
ಮಧ್ಯಾಹ್ನದ ವೇಳೆಗೆ ಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದಸುಮಾರು 160 ಗಣೇಶ ಮೂರ್ತಿಗಳು ಮತ್ತು 6 ಸಾರ್ವಜನಿಕ ಮೂರ್ತಿಗಳನ್ನು (ಹರ್ತಾಲಿಕಾ) ವಿಸರ್ಜನೆ ಮಾಡಲಾಗಿದೆ. ಈ ಪೈಕಿ ಮನೆಯಲ್ಲಿಪ್ರತಿಷ್ಠಾಪಿಸಲಾಗಿದ್ದ 45 ಮೂರ್ತಿಗಳು ಮತ್ತು ಐದು ಸಾವರ್ಜನಿಕ ಮೂರ್ತಿಗಳನ್ನು ನಗರದ ವಿವಿಧೆಡೆ ಇರುವ ಕೃತಕ ಕೊಳಗಳಲ್ಲಿ ವಿಸರ್ಜಿಸಲಾಯಿತು. ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಅವರು ತಿಳಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.