ADVERTISEMENT

‘ಹೆಬ್ಬಾವಿನ ಹಿಡಿತ’ದಿಂದ ಪಕ್ಷ ಉಳಿಸಲು ಹೋರಾಟ: ಶಿಂಧೆ

ಪಿಟಿಐ
Published 25 ಜೂನ್ 2022, 20:05 IST
Last Updated 25 ಜೂನ್ 2022, 20:05 IST
   

ಮುಂಬೈ: ಮಹಾ ವಿಕಾಸ್ ಆಘಾಡಿ (ಎಂವಿಎ) ಎಂಬ ‘ಹೆಬ್ಬಾವಿನ ಹಿಡಿತ’ದಿಂದ ಶಿವಸೇನಾವನ್ನು ಉಳಿಸಲು ನಾನು ಹೋರಾಡುತ್ತಿದ್ದೇನೆ ಎಂಬುದನ್ನು ಪಕ್ಷದ ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕು ಎಂದು ಶಿವಸೇನಾ ಬಂಡಾಯ ನಾಯಕ ಏಕನಾಥ ಶಿಂಧೆ ಶನಿವಾರ ಸಂಜೆ ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ನಿಷ್ಠರಾಗಿರುವ ಸೇನಾ ಕಾರ್ಯಕರ್ತರು
ಬಂಡಾಯ ಶಾಸಕರಿಗೆ ಸೇರಿದ ಕೆಲ ಸ್ಥಳಗಳಲ್ಲಿ ಕಲ್ಲು ತೂರಿದ್ದು ಮತ್ತು ಪುಣೆಯಲ್ಲಿ ಶಾಸಕರ ಕಚೇರಿಯನ್ನು ಧ್ವಂಸಗೊಳಿಸಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಶಿಂಧೆ ಈ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT