ADVERTISEMENT

‘ಮಾನವೀಯತೆಗೆ ಗೆಲುವು’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 6:45 IST
Last Updated 19 ಏಪ್ರಿಲ್ 2020, 6:45 IST
   

ನವದೆಹಲಿ (ಪಿಟಿಐ): ‘ಮಾನವೀಯತೆ ಕೊರೊನಾ ಸವಾಲು ಮೀರಿ ನಿಲ್ಲಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಜನರಿಗೆ ನೆರವಾಗುವ ವಿವಿಧ ಸಚಿವಾಲಯಗಳ ಕ್ರಮಗಳನ್ನೂ ಶ್ಲಾಘಿಸಿದ್ದಾರೆ.

ಸ್ವಿಟ್ಜರ್‌ಲೆಂಡ್‌ನ ಭಾರತೀಯ ರಾಯಭಾರ ಕಚೇರಿ ಟ್ವೀಟ್‌ಗೆ ಮೋದಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಕೋವಿಡ್‌ ವಿರುದ್ಧ ಹೋರಾಟಕ್ಕಾಗಿ ಭಾರತೀಯರನ್ನು ಬೆಂಬಲಿಸಿ ಸ್ವಿಟ್ಜರ್‌ಲೆಂಡ್‌ನ ಮ್ಯಾಟರ್‌ಹಾರ್ನ್ ಶಿಖರದಲ್ಲಿ 1000ಮೀಟರ್‌ ಅಳತೆಗೆ ಮೀರಿದ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಇದಕ್ಕೆ ಕೃತಜ್ಞತೆ ಸಲ್ಲಿಸಿ ರಾಯಭಾರ ಕಚೇರಿ ಟ್ವೀಟ್‌ ಮಾಡಿತ್ತು. ವಿವಿಧ ಸಚಿವಾಲಯಗಳ ಸೇವೆಯನ್ನು ಪ್ರಧಾನಿ ಶ್ಲಾಘಿಸಿದ್ದಾರೆ. ಭಾರತೀಯ ರೈಲ್ವೆ ಕುರಿತು ಹೆಮ್ಮೆಇದೆ. ಸದ್ಯ ರೈಲ್ವೆ ಜನರಿಗೆ ದೊಡ್ಡ ಪ್ರಮಾಣದ ನೆರವು ನೀಡುತ್ತಿದೆ ಎಂದು ರೈಲ್ವೆ ಸಚಿವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ನಾಗರಿಕ ವಿಮಾನಯಾನ ಸಚಿವರು, ಆದಾಯ ತೆರಿಗೆ ಇಲಾಖೆ ಗಳು ಕೈಗೊಂಡಿದ್ಡ ಪರಿಹಾರ ಕ್ರಮಗಳನ್ನು ಉಲ್ಲೇಖಿಸಿ ಮಾಡಿದ್ದ ಟ್ವೀಟ್‌ಗಳಿಗೂ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.