ADVERTISEMENT

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಎಐಸಿಸಿ ಕಚೇರಿಗೆ ಹೋಗುವ ಮಾರ್ಗ ಬಂದ್‌

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 14:50 IST
Last Updated 3 ಆಗಸ್ಟ್ 2022, 14:50 IST
ಎಐಸಿಸಿ ಕಚೇರಿಗೆ ಹೋಗುವ ಮಾರ್ಗ ಬಂದ್‌ ಮಾಡಿರುವ ಪೊಲೀಸರು
ಎಐಸಿಸಿ ಕಚೇರಿಗೆ ಹೋಗುವ ಮಾರ್ಗ ಬಂದ್‌ ಮಾಡಿರುವ ಪೊಲೀಸರು   

ನವದೆಹಲಿ:ಯಂಗ್‌ ಇಂಡಿಯನ್‌ ಕಚೇರಿಗೆ ಇ.ಡಿ ಬೀಗ ಮುದ್ರೆ ಹಾಕಿದ ಬೆನ್ನಲ್ಲೇ ದೆಹಲಿ ಪೊಲೀಸರು ಎಐಸಿಸಿ ಕೇಂದ್ರ ಕಚೇರಿಗೆ ಸಂಪರ್ಕ ಬೆಸೆಯುವ ರಸ್ತೆಯನ್ನು ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಿದ್ದಾರೆ.

ಎಐಸಿಸಿ ಕಚೇರಿ ಎದುರು ಪೊಲೀಸರನ್ನು ನಿಯೋಜಿಸಿರುವ ಹಾಗೂ ರಸ್ತೆ ಬಂದ್‌ ಮಾಡಿರುವ ದೃಶ್ಯವುಳ್ಳ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ‘ಪೊಲೀಸರು ಏಕೆ ಹೀಗೆ ಮಾಡಿದ್ದಾರೆ ಎಂಬುದೇ ನಿಗೂಢ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪ್ರತಿಭಟನಕಾರರು ಎಐಸಿಸಿ ಕಚೇರಿ ಮುಂದೆ ಸೇರುವ ಬಗ್ಗೆ ಮಾಹಿತಿ ಲಭಿಸಿದೆ. ಹೀಗಾಗಿ ಮುಂಜಾಗ್ರತಾ ದೃಷ್ಟಿಯಿಂದ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್‌ ಮಾಡಲಾಗಿದೆ’ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.