ಪಟಿಯಾಲಾ: 34 ವರ್ಷಗಳ ಹಿಂದೆ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷ ಕಠಿಣ ಸಜೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು ಪಟಿಯಾಲಾ ಕೇಂದ್ರ ಕಾರಾಗೃಹದ ಕೊಠಡಿ ಸಂಖ್ಯೆ 10ರಲ್ಲಿ ಇರಿಸಲಾಗಿದ್ದು, ಅವರು ಮೊದಲ ರಾತ್ರಿ ಜೈಲಿನಲ್ಲಿ ಊಟ ಮಾಡಿಲ್ಲ ಎಂದು ಮೂಲಗಳು ಶನಿವಾರ ತಿಳಿಸಿವೆ.
ಸಿಧು ಅವರು ಕಾರಾಗೃಹಕ್ಕೆ ಬರುವುದಕ್ಕೂ ಮುನ್ನವೇ ಊಟ ಮಾಡಿದ್ದರು. ಹಾಗಾಗಿ ಅವರು ಜೈಲಿನಲ್ಲಿ ಊಟ ಮಾಡಿಲ್ಲ.ಅವರೊಂದಿಗೆ ಕೊಠಡಿಯಲ್ಲಿ ಇನ್ನೂ ನಾಲ್ಕು ಕೈದಿಗಳು ಇದ್ದಾರೆ ಎಂದೂ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.