ADVERTISEMENT

ಬಹರೇನ್ ತಲುಪಿದ ಯುದ್ದನೌಕೆ ತ್ರಿಕಂದ್

ಪಿಟಿಐ
Published 5 ಮಾರ್ಚ್ 2023, 20:10 IST
Last Updated 5 ಮಾರ್ಚ್ 2023, 20:10 IST

ನವದೆಹಲಿ: ವಿಶ್ವದ ಪ್ರಮುಖ ಹಡಗು ಮಾರ್ಗಗಳಲ್ಲಿ ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿ ಉತ್ತೇಜಿಸಲು 34 ರಾಷ್ಟ್ರಗಳ ನೌಕಾಪಡೆಯ ಸಮೂಹ, ನೌಕಪಡೆಗಳ ಸಂಯುಕ್ತ ಒಕ್ಕೂಟ (ಸಿಎಂಎಫ್) ಸಂಯೋಜಿಸಿದ ಅಂತರರಾಷ್ಟ್ರೀಯ ಸಮುದ್ರಯಾನ ತಾಲೀಮಿನಲ್ಲಿ ಭಾಗವಹಿಸಲು ಭಾರತೀಯ ಯುದ್ಧನೌಕೆ ಐಎನ್ಎಸ್ ತ್ರಿಕಂದ್ ಬಹರೇನ್‌ ತಲುಪಿದೆ.

ವರ್ಷದ ಮೊದಲ ನೌಕಾ ಕಮಾಂಡರ್‌ಗಳ ಸಮ್ಮೇಳನಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಮತ್ತು ನೌಕಾಪಡೆ ಉನ್ನತ ಅಧಿಕಾರಿಗಳು ಅರಬ್ಬಿ ಸಮುದ್ರದಲ್ಲಿ ಸ್ವದೇಶಿ ಐಎನ್‌ಎಸ್ ವಿಕ್ರಾಂತ್ ಒಟ್ಟುಗೂಡುವ ಸಮಯದಲ್ಲಿ ಕಟ್ಲಾಸ್ ಎಕ್ಸ್‌ಪ್ರೆಸ್ 2023 ಸಮರಾಭ್ಯಾಸ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT