ADVERTISEMENT

ಮಹಾರಾಷ್ಟ್ರ | ಪೊಲೀಸ್ ಮಾಹಿತಿದಾರನೆಂದು ಬುಡಕಟ್ಟು ವ್ಯಕ್ತಿಯನ್ನು ಕೊಂದ ನಕ್ಸಲರು

ಪಿಟಿಐ
Published 29 ಮಾರ್ಚ್ 2024, 12:23 IST
Last Updated 29 ಮಾರ್ಚ್ 2024, 12:23 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗಢಿಚಿರೌಲಿ (ಮಹಾರಾಷ್ಟ್ರ): ಪೊಲೀಸ್‌ ಮಾಹಿತಿದಾರನೆಂದು ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬನನ್ನು ನಕ್ಸಲರು ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಗಢಿಚಿರೌಲಿಯಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಜಿಲ್ಲೆಯ ಅಹೇರಿ ತಾಲೂಕಿನ ಧಮ್‌ರಾಂಚ ಗ್ರಾಮದ ನಿವಾಸಿ ಅಶೋಕ್‌ ತಲಾಂದೆ ಅವರೇ ಕೊಲೆಗೀಡಾದವರು. ಇಂದು ಬೆಳಿಗ್ಗೆ ರಸ್ತೆಯೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹದ ಸಮೀಪ ನಕ್ಸಲ್ ಕರಪತ್ರ ಪತ್ತೆಯಾಗಿದೆ. ಕೊಲೆಯಾದ ವ್ಯಕ್ತಿ ಪೊಲೀಸ್ ಮಾಹಿತಿದಾರನಾಗಿದ್ದ ಎಂದು ಅದರಲ್ಲಿ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕೊಲೆಯಾದ ವ್ಯಕ್ತಿ ಪೊಲೀಸ್‌ ಮಾಹಿತಿದಾರನಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದು, ಅವರ ಕೊಲೆ ಹಿಂದಿನ ನೈಜ ಕಾರಣವನ್ನು ಪತ್ತೆ ಮಾಡಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.