ಉತ್ತರ ಪ್ರದೇಶ ಸರ್ಕಾರವು 2020–21ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮಂಗಳವಾರ ಮಂಡಿಸಿದೆ. ಅಯೋಧ್ಯೆಯ ಅಭಿವೃದ್ಧಿಗೆ ₹ 500 ಕೋಟಿಗೂ ಹೆಚ್ಚು ಅನುದಾನ ಮೀಸಲಿರಿಸಿದೆ.ಅಯೋಧ್ಯೆಯನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ರಾಜ್ಯ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಹೇಳಿದ್ದಾರೆ.
ವಾರಾಣಸಿ ಮತ್ತು ಕಾಶಿ ವಿಶ್ವನಾಥ ದೇವಾಲಯದ ಅಭಿವೃದ್ಧಿಗೂ ವಿವಿಧ ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ
₹ 85 ಕೋಟಿ:ಅಯೋಧ್ಯೆಯನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಮೀಸಲಿರಿಸಿದ ಅನುದಾನ
₹ 10 ಕೋಟಿ:ತುಳಸಿ ಸ್ಮಾರಕ ಭವನದ ಅಭಿವೃದ್ಧಿಗಾಗಿ ಮೀಸಲಿರಿಸಿದ ಹಣ
₹ 500 ಕೋಟಿ:ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಮೀಸಲಿರಿಸಿದ ಅನುದಾನ
ಕಾಶಿ ದೇವಾಲಯ ಅಭಿವೃದ್ಧಿ
₹ 200 ಕೋಟಿ:ಕಾಶಿ ವಿಶ್ವನಾಥ ದೇವಾಲಯದ ವಿಸ್ತರಣೆ ಮತ್ತು ಸೌಂದರ್ಯೀಕರಣಕ್ಕಾಗಿ ಬಜೆಟ್ನಲ್ಲಿ ತೆಗೆದಿರಿಸಲಾದ ಅನುದಾನ
₹ 180 ಕೋಟಿ:ವಾರಾಣಸಿಯಲ್ಲಿ ಸಾಂಸ್ಕೃತಿಕ ಕೇಂದ್ರ ಅಭಿವೃದ್ಧಿಗೆ ತೆಗೆದಿರಿಸಲಾದ ಅನುದಾನ
ಆಧಾರ: ಪಿಟಿಐ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.