ADVERTISEMENT

ಪ್ರತ್ಯೇಕತಾವಾದಿಗಳು ವಶಕ್ಕೆ

ಉಗ್ರರ ಗುಂಪಿಗೆ ಹಣ ರವಾನೆ ಆರೋಪ

ಪಿಟಿಐ
Published 4 ಜೂನ್ 2019, 19:32 IST
Last Updated 4 ಜೂನ್ 2019, 19:32 IST

ನವದೆಹಲಿ: 2008ರಲ್ಲಿ ನಡೆದ ಮುಂಬೈ ದಾಳಿಯ ಸಂಚುಕೋರ ಹಾಗೂ ಜಮಾತ್‌ ಉದ್ ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀದ್‌ ಸಯೀದ್‌ಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಮೂವರು ಪ್ರತ್ಯೇಕತಾವಾದಿಗಳಾದ ಮಸರಾತ್‌ ಅಲಂ, ಆಸಿಯಾ ಅಂದ್ರಾಬಿ ಮತ್ತು ಶಾಬಿರ್ ಶಾ ಅವರನ್ನು ದೆಹಲಿ ನ್ಯಾಯಾಲಯ ಮಂಗಳವಾರರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶಕ್ಕೆ ನೀಡಿದೆ.

ವಿಶೇಷ ನ್ಯಾಯಾಧೀಶ ರಾಕೇಶ್‌ ಸಯಾಲ್‌ ಅವರು ತಮ್ಮ ಕೊಠಡಿಯಲ್ಲಿ ವಿಚಾರಣೆ ನಡೆಸಿದ ನಂತರ ಈ ಮೂವರನ್ನು ಎನ್‌ಐಎ ವಶಕ್ಕೆ ಪಡೆಯಿತು. 15 ದಿನಗಳ ಕಾಲ ಇವರನ್ನು ವಿಚಾರಣೆ ನಡೆಸಲು ಅನುಮತಿ ಕೊಡಬೇಕು ಎಂದು ಎನ್‌ಐಎ ಕೋರಿದೆ.

ಪ್ರತ್ಯೇಕ ಪ್ರಕರಣಗಳಲ್ಲಿ ಆಸಿಯಾ ಮತ್ತು ಶಾ ಈಗಾಗಲೇ ಕಸ್ಟಡಿಯಲ್ಲಿದ್ದಾರೆ. ಅಲಂ ಅವರನ್ನು ಜಮ್ಮು ಮತ್ತು ಕಾಶ್ಮೀರದಿಂದ ಕರೆತರಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.