ADVERTISEMENT

ಕರ್ನಾಟದಲ್ಲಿ ಜಾತಿಗಣತಿ ದತ್ತಾಂಶ ಬಿಡುಗಡೆ ಮಾಡಿಲ್ಲ ಏಕೆ?: ಜೆಡಿಯು

ಪಿಟಿಐ
Published 19 ಜನವರಿ 2025, 9:43 IST
Last Updated 19 ಜನವರಿ 2025, 9:43 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

– ಪಿಟಿಐ ಚಿತ್ರ

ನವದೆಹಲಿ: ಜಾತಿಗಣತಿ ವಿಚಾರದಲ್ಲಿ ರಾಹುಲ್‌ ಗಾಂಧಿ ಅವರು ದ್ವಂದ್ವ ನಿಲುವು ಹೊಂದಿದ್ದಾರೆ ಎಂದು ಜನತಾ ದಳ (ಜೆಡಿಯು) ಭಾನುವಾರ ಆರೋಪಿಸಿದೆ.

ADVERTISEMENT

 ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾತಿಗಣತಿ ದತ್ತಾಂಶವನ್ನು ಏಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ‘ಇಂಡಿಯಾ’ ಒಕ್ಕೂಟದ ಸಭೆಯಲ್ಲಿ ಜಾತಿ ಗಣತಿ ವಿಷಯ ಪ್ರಸ್ತಾಪಿಸಿದಾಗ ರಾಹುಲ್ ಗಾಂಧಿ ಅವರು ಮೌನವಹಿಸಿದ್ದರು ಎಂದು ಹೇಳಿದೆ.

ಜೆಡಿಯು ಕಾರ್ಯಕಾರಿ ಅಧ್ಯಕ್ಷ ಮತ್ತು ಸಂಸದ ಸಂಜಯ್ ಝಾ ಅವರು, ‘ನಿತೀಶ್ ಅವರು ಜಾತಿಗಣತಿ ಪರವಾಗಿ ಮಾತನಾಡುವಾಗ ರಾಹುಲ್‌ ಮೌನ ವಹಿಸಿದ್ದರು. ಈಗ ಬಿಹಾರ ಸರ್ಕಾರ ನಡೆಸಿದ ಜಾತಿಗಣತಿ ನಕಲಿ ಎಂದು ಹೇಳುತ್ತಿದ್ದಾರೆ. ಇದಕ್ಕಿಂತ ಬೂಟಾಟಿಕೆ ಮತ್ತೊಂದಿಲ್ಲ’ ಎಂದು ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.