ADVERTISEMENT

ಓಮೈಕ್ರಾನ್ ಆತಂಕ: ಹೆದರುವ ಅವಶ್ಯಕತೆ ಇಲ್ಲವೆಂದ ಕೇಂದ್ರ ಆರೋಗ್ಯ ಇಲಾಖೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಡಿಸೆಂಬರ್ 2021, 13:28 IST
Last Updated 2 ಡಿಸೆಂಬರ್ 2021, 13:28 IST
ಬೆಂಗಳೂರಿನಲ್ಲಿ ಓಮೈಕ್ರಾನ್ ತಳಿ ವೈರಸ್ ಕಂಡುಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಮಾರ್ಷಲ್‌ಗಳು ಗುರುವಾರ ಸುರಕ್ಷತಾ ಕ್ರಮಗಳ ಬಗ್ಗೆ ಕ್ರಮವಹಿಸಿರುವುದು, ಚಿತ್ರ–ಪಿಟಿಐ
ಬೆಂಗಳೂರಿನಲ್ಲಿ ಓಮೈಕ್ರಾನ್ ತಳಿ ವೈರಸ್ ಕಂಡುಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಮಾರ್ಷಲ್‌ಗಳು ಗುರುವಾರ ಸುರಕ್ಷತಾ ಕ್ರಮಗಳ ಬಗ್ಗೆ ಕ್ರಮವಹಿಸಿರುವುದು, ಚಿತ್ರ–ಪಿಟಿಐ   

ನವದೆಹಲಿ: ಕೊರೊನಾವೈರಸ್‌ನ ರೂಪಾಂತರಿ ತಳಿಆಗಿ ಹೊರಹೊಮ್ಮಿ ಜಗತ್ತಿನಾದ್ಯಂತ ಆತಂಕ ಮೂಡಿಸಿರುವ ಓಮೈಕ್ರಾನ್ ತಳಿ ಇದೀಗ ಭಾರತದಲ್ಲೂ ಕಾಣಿಸಿಕೊಂಡಿದೆ.

ಈ ಬಗ್ಗೆ ಗುರುವಾರ ಕೇಂದ್ರ ಆರೋಗ್ಯ ಸಚಿವಾಲಯ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ ಇಬ್ಬರಿಗೆ ಓಮೈಕ್ರಾನ್ ತಗುಲಿದೆ ಎಂದು ಖಚಿತಪಡಿಸಿದೆ.

ಈ ಬೆನ್ನಲ್ಲೇ ಈ ವೈರಾಣುವಿನ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿರುವ ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಅವರು, ‘ಓಮೈಕ್ರಾನ್ ಅಪಾಯಕಾರಿ ಹೌದೋ? ಅಲ್ಲವೋ? ಎಂಬುದು ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ವ್ಯಾಪಕ ಸಂಶೋಧನೆಗಳು ನಡೆಯುತ್ತಿವೆ. ಭಾರತದಲ್ಲಿ ಜನರು ಹೆದರಿಕೊಳ್ಳುವ ಅವಶ್ಯಕತೆ ಇಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ಇದುವರೆಗೆ 29 ದೇಶಗಳಲ್ಲಿ 323 ಜನರಲ್ಲಿ ಓಮೈಕ್ರಾನ್ ಇರುವುದು ದೃಢಪಟ್ಟಿದೆ. ಇದರ ಸೋಂಕು ಕಂಡು ಬಂದವರಲ್ಲಿ ಮೆದು ಲಕ್ಷಣಗಳಿದ್ದು, ಮಾರಕವಾಗಿ ಯಾರಿಗೂ ಪರಿಣಮಿಸಿಲ್ಲ’ ಎಂದು ಅಗರವಾಲ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

‘ಬೆಂಗಳೂರಿನಲ್ಲಿ ಇಬ್ಬರಿಗೆ ಓಮೈಕ್ರಾನ್ ಇರುವುದು ದೃಢಪಟ್ಟಿದ್ದು, ಅವರನ್ನು ನಿಗಾದಲ್ಲಿರಿಸಲಾಗಿದೆ. ಓಮೈಕ್ರಾನ್ ಕಂಡು ಬಂದಿರುವ ದೇಶಗಳಿಂದ ಬರುವವರನ್ನು ವಿಮಾನ ನಿಲ್ದಾಣಗಳಲ್ಲೇ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಲಾಗುತ್ತೆ. ಒಂದು ವೇಳೆ ನೆಗೆಟಿವ್ ಕಂಡು ಬಂದರೂ ಸಹ ಅವರನ್ನು 7 ದಿನ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.