ADVERTISEMENT

ಆನ್‌ಲೈನ್‌ ರಮ್ಮಿಯಲ್ಲಿ ನಷ್ಟ: ತಮಿಳುನಾಡಿನಲ್ಲಿ ವ್ಯಕ್ತಿ ಆತ್ಮಹತ್ಯೆ

ಪಿಟಿಐ
Published 31 ಅಕ್ಟೋಬರ್ 2020, 10:42 IST
Last Updated 31 ಅಕ್ಟೋಬರ್ 2020, 10:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಯಮತ್ತೂರು: ಆನ್‌ಲೈನ್‌ ರಮ್ಮಿಯಲ್ಲಿ ಹಣ ಕಳೆದುಕೊಂಡ 28 ವರ್ಷದ ಬ್ಯಾಂಕ್‌ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದರು.

ಮದನ್‌ಕುಮಾರ್‌ ಮೃತ ವ್ಯಕ್ತಿ. ಅವರು ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಶನಿವಾರ ಮುಂಜಾನೆ ಕುಟುಂಬದ ಸದಸ್ಯರ ಗಮನಕ್ಕೆ ಬಂದಿದೆ.

ಆನ್‌ಲೈನ್‌ ರಮ್ಮಿಯಲ್ಲಿ ಆರಂಭಿಕ ಹಂತದಲ್ಲಿ ಹಣ ಮಾಡಿದ್ದ ಅವರು, ನಂತರದಲ್ಲಿ ಇದರ ಚಟಕ್ಕೆ ಬಿದ್ದಿದ್ದರು. ಬಳಿಕ ಹಣ ಕಳೆದುಕೊಂಡಾಗ ಮದ್ಯಪಾನದ ವ್ಯಸನಕ್ಕೆ ಒಳಗಾಗಿದ್ದರು. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.