ಶ್ರೀನಗರ:ಪಾಕಿಸ್ತಾನದ ಉಗ್ರ ಸಂಘಟನೆಗಳು ಕೇಂದ್ರಾಡಳಿತ ಪ್ರದೇಶದಲ್ಲಿದೊಡ್ಡಪ್ರಮಾಣದ ದುಷ್ಕೃತ್ಯನಡೆಸಲು ಪ್ರಯತ್ನಿಸುತ್ತಿವೆ ಎಂದು ಜಮ್ಮು ಮತ್ತು ಕಾಶ್ಮೀರದಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ಬುಧವಾರ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಿಂಗ್, ʼಜಮ್ಮು ಕಾಶ್ಮೀರದಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಲು ಪಾಕಿಸ್ತಾನಿ ಉಗ್ರ ಸಂಘಟನೆಗಳು ಪ್ರಯತ್ನಿಸುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.ನಮ್ಮ ಪಡೆಗಳು ಎಚ್ಚರವಾಗಿವೆ. ಪೊಲೀಸರು, ಗುಪ್ತಚರ ಏಜೆನ್ಸಿ ಮತ್ತು ರಕ್ಷಣಾ ಪಡೆಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ನಾವು ಅಂತಹ ಯಾವುದೇ ದುಷ್ಕೃತ್ಯಗಳನ್ನು ಹಿಮ್ಮೆಟ್ಟಿಸುತ್ತೇವೆ ಎಂಬವಿಶ್ವಾಸವಿದೆʼ ಎಂದು ತಿಳಿಸಿದ್ದಾರೆ.
ಬಂಡಿಪೋರಾ ಜಿಲ್ಲೆಯ ಗುರೇಜ್ ಸೆಕ್ಟರ್ನಲ್ಲಿರುವ ತರ್ಬಲ್ ಹಳ್ಳಿಯಲ್ಲಿಬುಧವಾರ ಜಂಟಿ ಶೋಧ ಕಾರ್ಯಾಚರಣೆ ನಡೆಸಿದ್ದ ಭಾರತೀಯ ಸೇನೆ ಮತ್ತು ಕಾಶ್ಮೀರ ಪೊಲೀಸರುಶಸ್ತ್ರಾಸ್ತ್ರಗಳುಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು.
ʼಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಲಭ್ಯವಾದ ಖಚಿತ ಮಾಹಿತಿ ಅನುಸಾರ ತರ್ಬಲ್ನಲ್ಲಿ ಸಂಜೆ6:30ಕ್ಕೆ ಹುಡುಕು ಕಾರ್ಯಾಚರಣೆ ಆರಂಭಿಸಲಾಯಿತುʼ ಎಂದು ಸೇನೆ ತಿಳಿಸಿತ್ತು.
ಕಾರ್ಯಾಚರಣೆ ವೇಳೆಮೂರುಎಕೆ-47,ಹನ್ನೆರಡು ಎಕೆ-47 ಮ್ಯಾಗಜಿನ್ಗಳು, 2ಪಿಸ್ತೂಲ್ ಮತ್ತು 4ಪಿಸ್ತೂಲ್ ಮ್ಯಾಗಜಿನ್ಗಳು ಹಾಗೂ16 ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.ಪಾಕಿಸ್ತಾನದ ದಿನಪತ್ರಿಕೆ ʼದುನಿಯಾʼದ ಒಂದು ಶೀಟ್ ಮತ್ತುಆದೇಶದಲ್ಲಿ ತಯಾರಾದ ತಿನಿಸುಗಳೂ ಸ್ಥಳದಲ್ಲಿ ಪತ್ತೆಯಾಗಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.