ADVERTISEMENT

ರಾಹುಲ್‍ ಗಾಂಧಿಗೆ ಬಾಂಬ್ ಕಟ್ಟಿ ಬೇರೆ ದೇಶಕ್ಕೆ ಕಳಿಸಬೇಕಿತ್ತು: ಪಂಕಜಾ ಮುಂಡೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 14:10 IST
Last Updated 22 ಏಪ್ರಿಲ್ 2019, 14:10 IST
   

ಮುಂಬೈ: ನಮ್ಮ ಯೋಧರ ಮೇಲೆ ದಾಳಿ ನಡೆದ ನಂತರನಾವುನಿರ್ದಿಷ್ಟ ದಾಳಿ ಮಾಡಿದ್ದೆವು.ಕೆಲವರು ಕೇಳುತ್ತಾರೆ ನಿರ್ದಿಷ್ಟ ದಾಳಿ ಅಂದರೆ ಏನು? ಸಾಕ್ಷ್ಯ ಎಲ್ಲಿದೆ ಎಂದು? ಅದಕ್ಕೆ ಉತ್ತರವಾಗಿ ನಾನು ಹೇಳುವುದೇನೆಂದರೆ ರಾಹುಲ್ ಗಾಂಧಿಗೆ ಬಾಂಬ್ ಕಟ್ಟಿ ಅವರನ್ನು ಬೇರೆ ದೇಶಕ್ಕೆ ಕಳುಹಿಸಬೇಕಾಗಿತ್ತು.ಹಾಗಾದರೆ ಅವರಿಗೆ ಅದು ಏನೆಂದು ತಿಳಿಯುತ್ತಿತ್ತು ಎಂದಿದ್ದಾರೆ ಬಿಜೆಪಿ ನಾಯಕಿ ಪಂಕಜಾ ಮುಂಡೆ.

ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದಾರೆ ಪಂಕಜಾ ಮುಂಡೆ.

ಸೋಮವಾರ ಇಲ್ಲಿನ ಜಲ್ನಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಪಂಕಜಾ, ಹಲವಾರು ಜನ ಸುದ್ದಿಯಾಗುವುದಕ್ಕಾಗಿಯೇ ನಿರ್ದಿಷ್ಟ ದಾಳಿ ಬಗ್ಗೆ ಪ್ರಶ್ನಿಸುತ್ತಾರೆ ಎಂದಿದ್ದಾರೆ.

ADVERTISEMENT

ವರದಿಗಳ ಪ್ರಕಾರ ಪಂಕಜಾ ಈ ರೀತಿ ಮಾತನಾಡಿದ ರ‍್ಯಾಲಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಮತ್ತು ಬಿಜೆಪಿ ರಾಜ್ಯ ಘಟಕ ಮುಖ್ಯಸ್ಥ ದಾನ್ವೆರಾವ್‌ಸಾಬೇಬ್ ದಾದಾರಾವ್ ಕೂಡಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.