ADVERTISEMENT

ಕೊಟ್ಟಾಯಂ: ರೈಲು ಪ್ರಯಾಣಿಕನಿಗೆ ಕಚ್ಚಿದ ಹಾವು

ಪಿಟಿಐ
Published 15 ಏಪ್ರಿಲ್ 2024, 16:17 IST
Last Updated 15 ಏಪ್ರಿಲ್ 2024, 16:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೊಟ್ಟಾಯಂ: ಮದುರೈಗೆ ತೆರಳುತ್ತಿದ್ದ ರೈಲಿನಲ್ಲಿದ್ದ ಪ್ರಯಾಣಿಕ ಕಾರ್ತಿಕ್ ಎನ್ನುವವರಿಗೆ ಸೋಮವಾರ ಹಾವು ಕಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದುರೈ–ಗುರುವಾಯೂರು ಪ್ಯಾಸೆಂಜರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ರೀತಿ ಆಗಿದೆ. ಕಾರ್ತಿಕ್ ಅವರನ್ನು ಎಟ್ಟಮಾನೂರ್ ನಿಲ್ದಾಣದಲ್ಲಿ ರೈಲಿನಿಂದ ಇಳಿಸಿ ಆಸ್ಪತ್ರೆಗೆ ದಾಖಲಿಸಲಾಯಿತು.

ADVERTISEMENT

ಕಾರ್ತಿಕ್ ಅವರು ಆರನೆಯ ಬೋಗಿಯಲ್ಲಿ ಇದ್ದರು. ಅವರು ಕುಳಿತಿದ್ದ ಸೀಟಿನ ಅಡಿಯಲ್ಲಿ ಇದ್ದ ಹಾವು ಕಚ್ಚಿದೆ. ಕಾರ್ತಿಕ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.