ADVERTISEMENT

ಅಂಗವಿಕಲರಿಗೆ ಬಡ್ತಿಯಲ್ಲಿ ಮೀಸಲಾತಿ ನಿರಾಕರಿಸಲಾಗದು: ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 19:04 IST
Last Updated 28 ಜೂನ್ 2021, 19:04 IST
ಸುಪ್ರೀಂ ಕೋರ್ಟ್‌  
ಸುಪ್ರೀಂ ಕೋರ್ಟ್‌     

ನವದೆಹಲಿ: ಕ್ರಿಯಾತ್ಮಕತೆ ಅಥವಾ ಇತರ ಕಾರಣಗಳನ್ನು ನೀಡಿ ಅಂಗವಿಕಲರಿಗೆ ಬಡ್ತಿಯಲ್ಲಿ ಮೀಸಲಾತಿ ನಿರಾಕರಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

‘ಮೀಸಲಾತಿ ನಿರಾಕರಿಸಿದರೆ ಇತರರು ಬಡ್ತಿ ಪಡೆದುಕೊಳ್ಳುವಾಗ ಅಂಗವಿಕಲರಲ್ಲಿ ಹತಾಶೆ ಉಂಟು ಮಾಡಬಹುದು’ ಎಂದು ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ಅವರೊನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಈ ಪರಿಸ್ಥಿತಿಯಲ್ಲಿ ಸರ್ಕಾರವು ಸಮಸ್ಯೆ ಪರಿಹರಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು ಎಂದೂ ಹೇಳಿದೆ.

ADVERTISEMENT

ಇತರರಂತೆ ಅಂಗವಿಕಲರನ್ನೂ ಬಡ್ತಿಗೆ ಪರಿಗಣಿಸಬೇಕು. ಇಂತಹ ವ್ಯಕ್ತಿಗಳಿಗೆ ಅನುಗುಣವಾದ ಹುದ್ದೆಗಳನ್ನು ಸರ್ಕಾರ ಗುರುತಿಸಬೇಕು ಎಂದೂ ನ್ಯಾಯಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.