ADVERTISEMENT

ಕೋವಿಡ್‌ ಜಾಗೃತಿ ಕಾಲರ್ ಟ್ಯೂನ್‌ನಿಂದ ಅಮಿತಾಭ್‌ ಧ್ವನಿ ತೆಗೆಯಲು ಕೋರಿ ಅರ್ಜಿ

ಪಿಟಿಐ
Published 7 ಜನವರಿ 2021, 10:25 IST
Last Updated 7 ಜನವರಿ 2021, 10:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮೊಬೈಲ್‌ ಕಾಲರ್ ಟ್ಯೂನ್‌ ಮೂಲಕ ಕೋವಿಡ್‌ ಕುರಿತು ಜಾಗೃತಿ ಮೂಡಿಸುವ ನಟ ಅಮಿತಾಭ್ ಬಚ್ಚನ್ ಅವರ ಧ್ವನಿಯನ್ನು ತೆಗೆಯಬೇಕು ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಸ್ವತಃ ಅಮಿತಾಭ್ ಬಚ್ಚನ್ ಮತ್ತು ಕುಟುಂಬದ ಸದಸ್ಯರೇ ಸೋಂಕು ಪೀಡಿತರಾಗಿದ್ದರು. ಕೆಲ ಕೊರೊನಾ ವಾರಿಯರ್‌ಗಳು ಉಚಿತವಾಗಿ ಧ್ವನಿ ಸೇವೆ ನೀಡಲು ಸಿದ್ಧರಿದ್ದಾರೆ ಎಂದು ಅರ್ಜಿದಾರರು ತಮ್ಮ ವಾದಕ್ಕೆ ಸಮರ್ಥನೆ ನೀಡಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠದ ಎದುರು ಈ ಅರ್ಜಿ ವಿಚಾರಣೆಗೆ ಬಂದಿದೆ. ಅರ್ಜಿಯ ವಿಚಾರಣೆಯನ್ನು ಜನವರಿ 18ಕ್ಕೆ ನಿಗದಿಪಡಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.