ADVERTISEMENT

ಪ್ರಧಾನಿ ಮೋದಿಯಿಂದ ಸಂಘರ್ಷಯುಕ್ತ ಒಕ್ಕೂಟ ವ್ಯವಸ್ಥೆ ಪಾಲನೆ: ಕಾಂಗ್ರೆಸ್

ಪಿಟಿಐ
Published 4 ಏಪ್ರಿಲ್ 2024, 15:45 IST
Last Updated 4 ಏಪ್ರಿಲ್ 2024, 15:45 IST
<div class="paragraphs"><p>ಜೈರಾಮ್‌ ರಮೇಶ್‌ </p></div>

ಜೈರಾಮ್‌ ರಮೇಶ್‌

   

ಪಿಟಿಐ ಚಿತ್ರ

ನವದೆಹಲಿ: ರಾಜ್ಯ ಸರ್ಕಾರವು ತಡವಾಗಿ ಮನವಿ ಸಲ್ಲಿಸಿದ ಕಾರಣ ಕರ್ನಾಟಕಕ್ಕೆ ಬರಪರಿಹಾರ ಬಿಡುಗಡೆಯಾಗಿಲ್ಲ ಎಂದಿರುವ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್, ‘ಕೇಂದ್ರ ಸರ್ಕಾರ ಹೇಳುತ್ತಿರುವುದು ಸಂಪೂರ್ಣ ಸುಳ್ಳು. ಪ್ರಧಾನಿ ಮೋದಿಯವರು ಸಂಘರ್ಷಯುಕ್ತ ಒಕ್ಕೂಟ ವ್ಯವಸ್ಥೆಯನ್ನು ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದೆ.

ADVERTISEMENT

‘ಈ ವಿಷಯದ ಬಗ್ಗೆ ಕಾಂಗ್ರೆಸ್‌ ಧ್ವನಿ ಎತ್ತಿದ 8 ತಿಂಗಳ ಬಳಿಕ ಮೋದಿ ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಕಥೆ ಹೆಣೆಯುತ್ತಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ವಾಗ್ದಾಳಿ ನಡೆಸಿದ್ದಾರೆ.

‘ಕರ್ನಾಟಕದ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳು ಬರಪೀಡಿತ‌ವಾಗಿವೆ. ಅದರಲ್ಲೂ 123 ತಾಲ್ಲೂಕುಗಳು ತೀವ್ರ ಬರದಿಂದ ತತ್ತರಿಸಿವೆ. ಕರ್ನಾಟಕಕ್ಕೆ ₹17900 ಕೋಟಿ ಪರಿಹಾರದ ಅಗತ್ಯವಿದೆ. ರೈತರು ₹35000 ಕೋಟಿ ಮೌಲ್ಯದ ಬೆಳೆ ನಾಶವಾಗಿದೆ. ಇಂತಹ ಭೀಕರ ಪರಿಸ್ಥಿತಿಯಿದ್ದರು ಕೇಂದ್ರಸರ್ಕಾರ ಈವರೆಗೆ ಒಂದು ರೂಪಾಯಿಯನ್ನೂ ನೀಡಿಲ್ಲ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.