ತಿರುಚಿರಾಪಳ್ಳಿ: ಇಲ್ಲಿನ ಶ್ರೀರಗಂನಲ್ಲಿರುವ ಪ್ರಸಿದ್ಧ ಶ್ರೀರಂಗನಾಥ ಸ್ವಾಮಿ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಬಳಿಕ ರಾಮೇಶ್ವರಂನ ರಾಮನಾಥಸ್ವಾಮಿ ದೇಗುಲದಲ್ಲೂ ಪೂಜೆ ಸಲ್ಲಿಸುವರು. ಶ್ರೀರಂಗಂನಲ್ಲಿ ವಿವಿಧ ಪಂಡಿತರು ಪಠಿಸಲಿರುವ ಕಂಬ ರಾಮಾಯಣವನ್ನು ಆಲಿಸುವರು.
ಅಪರಾಹ್ನ ರಾಮೇಶ್ವರಂಗೆ ತಲುಪಲಿರುವ ಪ್ರಧಾನಿ ಅಲ್ಲಿ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಅಲ್ಲಿ ನಡೆಯುವ ಭಕ್ತಿಗೀತೆ ಪಠಣಕ್ಕೆ ಕಿವಿಗೊಡಲಿದ್ದಾರೆ.
ಶ್ರೀರಗಂ ದೇಗುಲವು ‘ಭೂಲೋಗ ವೈಕುಂಠ’ (ಭೂಮಿ ಮೇಲಿನ ವೈಕುಂಠ) ಎಂದೇ ಪ್ರಸಿದ್ಧಿ ಪಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.