ADVERTISEMENT

ನವೆಂಬರ್‌ 5ರಂದು ಕೇದಾರನಾಥಕ್ಕೆ ಪ್ರಧಾನಿ ಮೋದಿ ಭೇಟಿ

ಪಿಟಿಐ
Published 16 ಅಕ್ಟೋಬರ್ 2021, 10:38 IST
Last Updated 16 ಅಕ್ಟೋಬರ್ 2021, 10:38 IST
   

ಡೆಹ್ರಾಡೂನ್:‌ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್‌5ರಂದು ಕೇದಾರನಾಥಕ್ಕೆ ತೆರಳಲಿದ್ದು, ಕೇದಾರಪುರಿಪುನರ್ ನಿರ್ಮಾಣ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ರಿಷಿಕೇಶದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಅಕ್ಟೋಬರ್‌7 ರಂದು ಭೇಟಿ ನೀಡಿ ಆಮ್ಲಜನಕ ಘಟಕದ ಉದ್ಘಾಟಿಸಿದ್ದರು. ಹೀಗಾಗಿಮೋದಿ ಅವರು ತಿಂಗಳ ಅವಧಿಯಲ್ಲಿ ಎರಡು ಬಾರಿ ಉತ್ತರಾಖಂಡ್‌ಗೆ ಆಗಮಿಸಿದಂತಾಗಲಿದೆ.

ಮೋದಿ ಭೇಟಿ ವಿಚಾರವನ್ನುಖಚಿತಪಡಿಸಿರುವಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ,ಪ್ರಧಾನಿಯವರು ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಅದೇರೀತಿ, ಆದಿ ಗುರು ಶಂಕರಾಚಾರ್ಯರ ಸಮಾಧಿ ಮರು ನಿರ್ಮಾಣ ಸೇರಿದಂತೆ ₹ 250 ಕೋಟಿ ವೆಚ್ಚದ ಕೇದಾರಪುರಿ ಪುನರ್‌ನಿರ್ಮಾಣ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.