ADVERTISEMENT

ಮದರಸಾಗಳಲ್ಲಿನ ಬೋಧಕರ ಮೇಲೆ ಹದ್ದಿನ ಕಣ್ಣು: ಅಸ್ಸಾಂ ಸಿಎಂ ಹಿಮಾಂತ್ ಬಿಸ್ವಾ ಶರ್ಮಾ

ಪಿಟಿಐ
Published 2 ಜನವರಿ 2023, 2:35 IST
Last Updated 2 ಜನವರಿ 2023, 2:35 IST
   

ಗುವಾಹಟಿ: ಇತ್ತೀಚೆಗೆ ಪೊಲೀಸರು ತಪಾಸಣೆ ಮಾಡಿದಾಗ ಅಸ್ಸಾಂನ ಕೆಲ ಮದರಸಾಗಳಲ್ಲಿ 71 ಜನ ಬಾಂಗ್ಲಾದೇಶಿಯರು ಪತ್ತೆಯಾಗಿದ್ದರು. ಈ ಘಟನೆ ನಂತರ ಅಸ್ಸಾಂ ಸರ್ಕಾರ ಮದರಸಾಗಳ ಮೇಲೆ ನಿಗಾ ಇಡಲು ಮುಂದಾಗಿದೆ.

ಅಸ್ಸಾಂನ ಮದರಸಾಗಳಲ್ಲಿ ಬೋಧಿಸಲು ಬರುವ ಅನ್ಯರಾಜ್ಯದವರು ನಿಯಮಿತವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಬಂದು ಹಾಜರಿ ಸಲ್ಲಿಸಿ ಹೋಗಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.

ಮದರಸಾಗಳಲ್ಲಿ ಕೆಲಸ ಮಾಡುವವರ ಚೆಕ್‌ಲಿಸ್ಟ್ ತಯಾರಿಸುವ ಕಾರ್ಯ ಪ್ರಗತಿಯಲ್ಲಿದೆ. ಮದರಾಸಗಳ ವಿಷಯದಲ್ಲಿ ನಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು.

ADVERTISEMENT

ಅಸ್ಸಾಂನಲ್ಲಿ ನೋಂದಣಿಯಾಗಿರುವ ಮತ್ತು ನೋಂದಣಿಯಾಗದಿರುವ ಸುಮಾರು 3,000 ಮದರಸಾಗಳು ಇವೆ. ಇವುಗಳ ಮೇಲೆ ನಮ್ಮ ಪೊಲೀಸರು ಹದ್ದಿನ ಕಣ್ಣಿಡುತ್ತಿದ್ದಾರೆ. ಅದಾಗ್ಯೂ ಮುಸ್ಲಿಂರ ವಿಚಾರದಲ್ಲಿ ನಮ್ಮ ಪೊಲೀಸರು ಉತ್ತಮವಾಗಿ ವರ್ತಿಸಲಿದ್ದಾರೆ. ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಮುಂದೆ ಬರುವ ಮುಸ್ಲಿಂರ ಜೊತೆ ನಾವು ಕೂಡ ಉತ್ತಮವಾಗಿ ಕೆಲಸ ಮಾಡಲಿದ್ದೇವೆ ಎಂದು ಶರ್ಮಾ ಹೇಳಿದರು.

ಮದರಸಾಗಳಲ್ಲಿ ಇರುವವರು ನಮ್ಮ ವೈರಿಗಳಲ್ಲ. ಆದರೆ, ಅಲ್ಲಿನ ಬೆಳವಣಿಗೆಗಳು ಸರಿಯಾಗಿ ನಡೆದಿವೆಯೇ ಎಂಬುದನ್ನು ಗಮನಿಸುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.