ADVERTISEMENT

ಟೆಲಿಕಾಂ ಉದ್ದಿಮೆ ಪುನಶ್ಚೇತನಕ್ಕೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 18:41 IST
Last Updated 1 ಜೂನ್ 2019, 18:41 IST

ನವದೆಹಲಿ: ದೇಶದ ದೂರಸಂಪರ್ಕ ಉದ್ದಿಮೆಯ ‘ಆರೋಗ್ಯ’ ಸುಧಾರಿಸುವುದರ ಜೊತೆಗೆ ಸಾರ್ವಜನಿಕ ಕ್ಷೇತ್ರದ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ಗೆ ಪುನಶ್ಚೇತನ ನೀಡುವುದು ದೂರಸಂಪರ್ಕ ಸಚಿವಾಲಯದ ನೂತನ ಸಚಿವ ರವಿಶಂಕರ್ ಪ್ರಸಾದ್ ಅವರ ಪ್ರಥಮ ಆದ್ಯತೆಯಾಗಲಿದೆ.

ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವರಾಗಿ ನೇಮಕಗೊಂಡಿರುವ ಪ್ರಸಾದ್, ‘ಮಾಹಿತಿ ಸಂರಕ್ಷಣಾ ಮಸೂದೆಯನ್ನು ತ್ವರಿತವಾಗಿ ಸಂಸತ್ತಿನಲ್ಲಿ ಮಂಡಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸುವುದನ್ನು ತಡೆಯಲು ಕಾನೂನು ಬಲಪಡಿಸುವುದು ನನ್ನ ಆದ್ಯತೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT