ADVERTISEMENT

ಇಂಧನ ಪರಿವರ್ತನೆಗೆ ಸಮಿತಿ ರಚಿಸಿ: ಕೇಂದ್ರಾಡಳಿತ, ರಾಜ್ಯಗಳಿಗೆ ನಿರ್ದೇಶನ

ಪಿಟಿಐ
Published 25 ಮೇ 2022, 15:44 IST
Last Updated 25 ಮೇ 2022, 15:44 IST

ನವದೆಹಲಿ: ಇಂಧನ ಬಳಕೆಯ ಪರಿವರ್ತನೆಗಾಗಿ ರಾಜ್ಯಗಳಲ್ಲಿ ಚಾಲನಾ ಸಮಿತಿಗಳನ್ನು ರಚಿಸುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಇಂಧನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ ಸಿಂಗ್ ಅವರು ಸೂಚಿಸಿದ್ದಾರೆ. ಅಲ್ಲದೆ, 2024ರ ಅವಧಿ ವೇಳೆಗೆ ಕೃಷಿ ವಲಯದಲ್ಲಿ ಡೀಸೆಲ್ ಬಳಕೆಯನ್ನು ಶೂನ್ಯಕ್ಕೆ ಇಳಿಸಲು ಪ್ರಯತ್ನ ಮಾಡುವಂತೆ ಸೂಚಿಸಲಾಗಿದೆ.

ಈ ಸಮಿತಿಗಳು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT