ನವದೆಹಲಿ: ದೇಶದಲ್ಲಿ ಸುಮಾರು 4 ಕೋಟಿ ಜನರು ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನಾಲ್ಕು ಕೋಟಿ ಒಂದು ಸಂಖ್ಯೆಯಲ್ಲ, ಇದರಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ಭಾರತದಲ್ಲಿದ್ದ ಉತ್ತಮವಾದುದನ್ನು ಪಡೆಯಲು ಅರ್ಹತೆಯುಳ್ಳವರಾಗಿದ್ದಾರೆ’ ಎಂದು ರಾಹುಲ್ ಟ್ವೀಟ್ನಲ್ಲಿ ಹೇಳಿದ್ದಾರೆ.
ರಾಹುಲ್ ಗಾಂಧಿ ಆಕ್ಸ್ಫ್ಯಾಮ್ ವರದಿಯನ್ನು ಉಲ್ಲೇಖಿಸಿದ್ದಾರೆ. 2021 ರ ಅವಧಿಯಲ್ಲಿ ಇಬ್ಬರು ಉನ್ನತ ಉದ್ಯಮಿಗಳ ಸಂಪತ್ತು ಶತಕೋಟಿ ಡಾಲರ್ಗಳಷ್ಟು ಬೆಳೆದಿದೆ ಎಂದು ಗ್ರಾಫಿಕ್ ಮೂಲಕ ತೋರಿಸಿದ್ದಾರೆ. 2020 ರಿಂದ ಸಾಂಕ್ರಾಮಿಕ ಸಮಯದಲ್ಲಿ ಭಾರತದಲ್ಲಿ ನಾಲ್ಕು ಕೋಟಿಗೂ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.