ADVERTISEMENT

ಚುನಾವಣಾ ಆಯೋಗ ಮೋದಿಗೆ ಶರಣಾಗಿದೆ: ರಾಹುಲ್ ಗಾಂಧಿ 

​ಪ್ರಜಾವಾಣಿ ವಾರ್ತೆ
Published 20 ಮೇ 2019, 5:15 IST
Last Updated 20 ಮೇ 2019, 5:15 IST
   

ನವದೆಹಲಿ: ಚುನಾವಣಾ ಆಯೋಗ ಪ್ರಧಾನಿ ನರೇಂದ್ರ ಮೋದಿ ಮುಂದೆ ಶರಣಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಚುನಾವಣಾ ಬಾಂಡ್‌ನಿಂದ ಹಿಡಿದು ಇವಿಎಂ, ಚುನಾವಣಾ ದಿನಾಂಕದ ಬದಲಾವಣೆ, ನಮೋ ಟಿ.ವಿ, ಮೋದಿಯವರ ಸೇನೆ ಮತ್ತು ಇದೀಗ ಕೇದಾರನಾಥ ನಾಟಕ; ಚುನಾವಣಾ ಆಯೋಗವು ಮೋದಿ ಮತ್ತು ಅವರ ತಂಡದ ಮುಂದೆ ಶರಣಾಗಿದೆ ಎಂಬುದು ಎಲ್ಲ ಭಾರತೀಯರಿಗೆ ಗೊತ್ತಿದೆ.ಚುನಾವಣಾ ಆಯೋಗದ ಬಗ್ಗೆ ಭಯ, ಗೌರವ ಇತ್ತು, ಆದರೆ ಅದು ಇಲ್ಲದಾಗಿದೆ ಎಂದು ರಾಹುಲ್ ಟ್ವೀಟಿಸಿದ್ದಾರೆ.

ಈ ಹಿಂದೆಯೂ ಚುನಾವಣಾ ಆಯೋಗ ಪಕ್ಷಪಾತ ಮಾಡುತ್ತಿದೆ ಎಂದು ಕಾಂಗ್ರೆಸ್ ದೂರಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.