ನವದೆಹಲಿ: ದಟ್ಟ ಮಂಜಿನಿಂದ ಕೂಡಿರುವ ಚಳಿಗಾಲದ ಅವಧಿಯಲ್ಲಿ ರೈಲುಗಳು ನಿಗದಿತ ಗುರಿ ಕ್ರಮಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿದ್ದು, ಇದನ್ನು ತಪ್ಪಿಸುವುದಕ್ಕಾಗಿ ರೈಲುಗಳ ವೇಗ ಹೆಚ್ಚಿಸಲು ರೈಲ್ವೆ ಇಲಾಖೆ ಮುಂದಾಗಿದೆ.
‘ರೈಲು ಎಂಜಿನ್ಗಳಿಗೆ ಅಳವಡಿಸಲಾಗುವ ಮಂಜಿನ ಸಾಧನಗಳ ನೆರವಿನೊಂದಿಗೆ ಅವುಗಳ ವೇಗದ ಮಿತಿಯನ್ನು ಈಗಿರುವ 60 ಕಿ.ಮೀ ನಿಂದ (ಗಂಟೆಗೆ) 75 ಕಿ.ಮೀ ಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ’ ಎಂದು ಭಾರತೀಯ ರೈಲ್ವೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.