ADVERTISEMENT

ಅಸ್ಸಾಂ ರಾಜ್ಯಪಾಲರನ್ನು ಭೇಟಿಯಾದ ವಸುಂಧರಾ ರಾಜೇ

ಪಿಟಿಐ
Published 16 ಅಕ್ಟೋಬರ್ 2023, 14:28 IST
Last Updated 16 ಅಕ್ಟೋಬರ್ 2023, 14:28 IST
ವಸುಂಧರಾ ರಾಜೇ
ವಸುಂಧರಾ ರಾಜೇ   

ಜೈಪುರ: ರಾಜಸ್ಥಾನ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ರಾಜ್ಯದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರು ಅಸ್ಸಾಂ ರಾಜ್ಯಪಾಲ ಗುಲಾಬ್‌ಚಂದ್‌ ಅವರನ್ನು ಉದಯಪುರದಲ್ಲಿ ಭಾನುವಾರ ಭೇಟಿಯಾಗಿದ್ದರು.

ಇದು ಮೊದಲೇ ನಿರ್ಧಾರವಾಗಿದ್ದ ಭೇಟಿಯಲ್ಲ. ಭೇಟಿ ವೇಳೆ ಇಬ್ಬರೂ ದೀರ್ಘಕಾಲ ಚರ್ಚೆ ನಡೆಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯದ ಮೇವಾಡ್‌ ಪ್ರದೇಶದ ರಾಜಕೀಯ ದೃಷ್ಟಿಯಿಂದ ಇದು ಮಹತ್ವದ ಸಭೆ ಎಂದು ಪರಿಗಣಿಸಲಾಗಿದೆ. ಕಠಾರಿಯಾ ಅವರು ಉದಯಪುರ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದಿದ್ದರು. ಈಗ ಅವರು ರಾಜ್ಯಪಾಲರಾಗಿರುವ ಕಾರಣ, ಆ ಕ್ಷೇತ್ರದಿಂದ ಪ್ರಭಾವಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.