ನವದೆಹಲಿ: ಐದು ಅವಧಿಗೆ ರಾಜ್ಯಸಭೆಯ ಸದಸ್ಯರಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸೇವೆಯನ್ನು ಶುಕ್ರವಾರ ಸದನದಲ್ಲಿ ಅಧ್ಯಕ್ಷ ಎಂ.ವೆಂಕಯ್ಯನಾಯ್ಡು ಶ್ಲಾಘಿಸಿದರು.
ರಾಜ್ಯಸಭೆ ಅಧಿವೇಶನದ ಮೊದಲ ದಿನವಾದ ಶುಕ್ರವಾರ ವಿಷಯ ಪ್ರಸ್ತಾಪಿಸಿದ ಅಧ್ಯಕ್ಷರು, ಅರ್ಥಶಾಸ್ತ್ರಜ್ಞರೂ ಆದ ಮನಮೋಹನ್ ಸಿಂಗ್ ಅವರ ಅವಧಿಯು ಜೂನ್ 15ರಂದು ಪೂರ್ಣಗೊಂಡಿದೆ’ ಎಂದು ತಿಳಿಸಿದರು.
1991ರಿಂದ ಐದು ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದ ಮನಮೋಹನ್ ಸಿಂಗ್, ಎರಡು ಸತತ ಅವಧಿಗೆ ಪ್ರಧಾನಮಂತ್ರಿ ಆಗಿದ್ದರು. ಮಿತಭಾಷಿಯಾಗಿದ್ದ, ಘನತೆಯ ವ್ಯಕ್ತಿತ್ವದ ಸಿಂಗ್ ಆರ್ಥಿಕ ವ್ಯವಸ್ಥೆ ಕುರಿತ ಚರ್ಚೆಗಳಲ್ಲಿ ಭಾಗವಹಿಸಿ ಕೊಡುಗೆ ನೀಡಿದ್ದಾರೆ ಎಂದರು. ಸದಸ್ಯರಾಗಿದ್ದ ಎಸ್.ಕುಜೂರ್ ಅವರ ಅವಧಿಯೂ ಜೂನ್ 15ರಂದೇ ಮುಗಿದಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.