ತಿರುವನಂತಪುರ: ಖ್ಯಾತ ವಿಜ್ಞಾನಿ, ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್) ಮಾಜಿ ನಿರ್ದೇಶದ ಎ.ಡಿ.ದಾಮೋದರನ್ (87) ಅವರು ಶುಕ್ರವಾರ ನಿಧನರಾದರು.
ಇಲ್ಲಿನ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಶನಿವಾರ ‘ಶಾಂತಿ ಕಾವದಂ’ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಇವರಿಗೆ ಪತ್ನಿ ಇ.ಎಂ ಮಾಲತಿ, ಪುತ್ರ ಮತ್ತು ಪತ್ರಿ ಇದ್ದಾರೆ. ಮಾಲತಿ ಅವರು ಕೇರಳದ ಮೊದಲ ಮುಖ್ಯಮಂತ್ರಿ ಇ.ಎಂ.ಎಸ್.ನಂಬೂದರಿಪದ ಅವರ ಪುತ್ರಿ.
ದಾಮೋದರನ್ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.